ಧಾರವಾಡ prajakiran.com : ಕೊರೋನಾ ಕರಿನೆರಳ ಛಾಯೇ ಎಲ್ಲರನ್ನೂ ಸಂಕಷ್ಟದ ಸ್ಥಿತಿಗೆ ತಂದು ನಿಲ್ಲಿಸಿದೆ.
ಅದರಂತೆ ಭವಿಷ್ಯದಲ್ಲಿ ಉನ್ನತ ಹುದ್ದೆಗೆ ಹೋಗಲು ತಯಾರಿಯಾಗಿದ್ದ ವಿದ್ಯಾರ್ಥಿಗಳ ಬದುಕಿಗೂ ಕತ್ತಲೆ ತಂದಿದೆ.
ಈ ಹಿನ್ನೆಲೆಯಲ್ಲಿ ಧಾರವಾಡದ ವಿದ್ಯಾರ್ಥಿಯೋಬ್ಬ ರಕ್ತದಲ್ಲಿ ಗೃಹ ಮಂತ್ರಿಗಳಿಗೆ ಪತ್ರ ಬರೆದಿದ್ದಾನೆ.
ಹೌದು ಲಾಕ್ಡೌನ್ ಹಿನ್ನೆಲೆಯಲ್ಲಿ ಪೋಲೀಸ್ ನೇಮಕಾತಿ, ಪಿಎಸ್ಸೈ ನೇಮಕಾತಿ ನಡೆದಿಲ್ಲ.
ಸರಿ ಸುಮಾರು ಎರಡು ವರ್ಷಗಳು ಕಳೆದಿವೆ ಈ ಹಿನ್ನೆಲೆಯಲ್ಲಿ ಪೋಲೀಸ್ ನೇಮಕಾತಿ ಹಾಗೂ ಪಿಎಸ್ಸೈ ನೇಮಕಾತಿ ವಯೋಮಿತಿ ಹೆಚ್ಚಳ ಮಾಡಬೇಕು.
ನಮ್ಮ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ರಕ್ತದಲ್ಲಿ ಗೃಹ ಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾನೆ.
ಈ ಪತ್ರವನ್ನು ಧಾರವಾಡ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಹಾಗೂ ಗೃಹ ಸಚಿವರಿಗೆ ಹಸ್ತಾಂತರ ಮಾಡಿದ್ದಾನೆ.
ಎಸ್ಸಿ ಎಸ್ಟಿ ಯುವಕರಿಗೆ 27 ರಿಂದ 29 ವರ್ಷ ಏರಿಕೆ ಮಾಡಬೇಕೆಂದು ಹಾಗೂ ಉಳಿದ ಯುವಕರಿಗೆ 25 ರಿಂದ 27 ವರ್ಷ ನಿಗದಿ ಮಾಡಬೇಕು ಆಕಾಂಕ್ಷಿಗಳು ಆಗ್ರಹಿಸಿದ್ದಾರೆ.