ಮುಧೋಳ prajakiran.com : ತಾಯಿಯನ್ನು ಕಳೆದುಕೊಂಡ ಮೂರು ದಿನದ ಅಂತರದಲ್ಲಿಯೇ
ಕರ್ನಾಟಕ ಕೇಸರಿ ಖ್ಯಾತಿಯ ಸಿದ್ದಾಂತ ಮಾನೆ ಕೂಡ ಕೋವಿಡ್ ಗೆ ಬಲಿಯಾಗಿದ್ದಾನೆ.
ಕೇವಲ 35 ವಯಸ್ಸಿನ ಈ ಯುವ ಪ್ರತಿಭೆ ಧಾರವಾಡದ ಜನತಾ ಶಿಕ್ಷಣ ಸಮಿತಿಯ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ.
ಕರ್ನಾಟಕ ಕೇಸರಿ, ದಸರಾ ಕೇಸರಿ ಅಖಿಲ ಭಾರತ ಮಟ್ಟದ ಕುಸ್ತಿಯಲ್ಲಿ ಪದಕ ವಿಜೇತನಾಗಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದ.
ಹಾಗೂ ಪ್ರಸ್ತುತ ಮುಧೋಳ ನಗರ ಸಭೆಯ ಅಧ್ಯಕ್ಷರಾಗಿ ಸಲ್ಲಿಸುತ್ತಿದ್ದ ಸಿದ್ಧಾಂತ ಮಾನೆಯವರು (೩೫ ವರ್ಷ) ಭಾನುವಾರ ಇಹಲೋಕ ತ್ಯಜಿಸಿದರು.
ಮೃತರು ಮೂರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದು, ಇವರ ನಿಧನಕ್ಕೆ ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾದ ಡಾ. ನ.ವಜ್ರಕುಮಾರ, ವಿತ್ತಾಧಿಕಾರಿಗಳಾದ ಡಾ.ಅಜಿತ ಪ್ರಸಾದ ಹಾಗೂ ಕ್ರೀಡಾ ಅಧಿಕಾರಿಗಳಾದ ಜಿನ್ನಪ್ಪ ಕುಂದಗೋಳ ಸಂತಾಪ ವ್ಯಕ್ತಪಡಿಸಿದ್ದಾರೆ.