ಹುಬ್ಬಳ್ಳಿ, prajakiran. com : ಧಾರವಾಡ ಜಿಲ್ಲೆಯಲ್ಲಿ ಕಠಿಣ ಲಾಕ್ಡೌನ್ ಮಾಡುವ ಕುರಿತು ಬೃಹತ್
ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ
ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ
ಸಚಿವ ಜಗದೀಶ್ ಶೆಟ್ಟರ್, ಇಂದು
ಹುಬ್ಬಳ್ಳಿ ಸರ್ಕ್ಯೂಟ್ ಹೌಸ್ನಲ್ಲಿ
ಅಧಿಕಾರಿಗಳೊಂದಿಗೆ ಚರ್ಚಿಸಿದರು.
ವಾರಂತ್ಯದ ಲಾಕ್ಡೌನ್ ಮಾದರಿಯಲ್ಲಿ
ವಾರದ 5 ದಿನ ಕಠಿಣ ಲಾಕ್ಡೌನ್ ಮಾಡಿ
ಗುರುವಾರ ಮತ್ತು ಶುಕ್ರವಾರ
ಸಾರ್ವಜನಿಕರಿಗೆ ಅಗತ್ಯ ವಸ್ತುಗಳ
ಖರೀದಿಗೆ ಅವಕಾಶ ನೀಡಿವ ಕುರಿತು
ಸಚಿವರು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ನಿತೀಶ್
ಪಾಟೀಲ್, ಹುಬ್ಬಳ್ಳಿ ಧಾರವಾಡ
ಪೋಲೀಸ್ ಕಮಿಷನರ್ ಲಾಬುರಾಮ,
ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ
ಪಿ.ಕೃಷ್ಣಕಾಂತ್, ಮಹಾನಗರ ಪಾಲಿಕೆ
ಆಯುಕ್ತ ಡಾ.ಸುರೇಶ್ ಇಟ್ಟಾಳ್
ಸಭೆಯಲ್ಲಿ ಭಾಗವಹಿಸಿದ್ದರು.
ಸಚಿವರ ಸಲಹೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಂಜೆ 5.30ಕ್ಕೆ ಸುದ್ದಿಗೋಷ್ಠಿಯನ್ನು ಆಯೋಜಿಸಿದ್ದಾರೆ.
ಮೇ 24ರಿಂದ ಕಠಿಣ ಲಾಕ್ಚಡೌನ್ ಜಾರಿಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.