ರಾಜ್ಯದಲ್ಲಿ 5257 ಜನ ಬಿಡುಗಡೆ
ಬೆಂಗಳೂರು prajakiran.com : ರಾಜ್ಯದಲ್ಲಿ ಶುಕ್ರವಾರವೂ ಮಹಾಮಾರಿ ಕರೋನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಕೂಡ ವಿವಿಧ ಜಿಲ್ಲೆಗಳಲ್ಲಿ 104 ಜನ ಸಾವನ್ನಪ್ಪಿದ್ದಾರೆ.
ಮತ್ತೆ ಹೊಸದಾಗಿ 7908 ಜನರಿಗೆ ಸೋಂಕು ಹರಡಿದ್ದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2,11,108ಕ್ಕೆ ಏರಿಕೆಯಾಗಿದೆ.
ಇಂದು ರಾಜ್ಯದಲ್ಲಿ 5257 ಜನ ಬಿಡುಗಡೆಗೊಂಡಿದ್ದು, ಈವರೆಗೆ ಒಟ್ಟು 1,26,499 ಜನ ಗುಣಮುಖರಾಗಿದ್ದು, 80,884 ಸಕ್ರಿಯ ಪ್ರಕರಣಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
747 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ -19 ಸೋಂಕಿನಿಂದ ರಾಜ್ಯದಲ್ಲಿ ಶುಕ್ರವಾರವೂ 104 ಜನ ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 3717 ಕ್ಕೆ ಏರಿಕೆಯಾದಂತಾಗಿದೆ.
ಶುಕ್ರವಾರ ಪತ್ತೆಯಾದ ಪ್ರಕರಣಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ನಗರ ದಲ್ಲಿಯೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.
ಬೆಂಗಳೂರಿನಲ್ಲಿ 2452,ಬರೋಬ್ಬರಿ ಜನ ಸೋಂಕಿತರು ಕಂಡು ಬಂದಿರುವುದು ಬೆಂಗಳೂರಿಗರನ್ನು ಮತ್ತೆ ಬೆಚ್ಚಿಬೀಳಿಸುವಂತೆ ಮಾಡಿದೆ.
ಇನ್ನೂಳಿದಂತೆ ಬಳ್ಳಾರಿ 608, ಶಿವಮೊಗ್ಗ 413, ದಾವಣಗೆರೆ 351, ಬೆಳಗಾವಿ 334, ಉಡುಪಿ 322, ದಕ್ಷಿಣ ಕನ್ನಡ 307, ಮೈಸೂರು 291, ಕಲಬುರಗಿ 229, ರಾಯಚೂರು 220, ಧಾರವಾಡ 219, ಗದಗ 190, ತುಮಕೂರು 185, ಬಾಗಲಕೋಟೆ 171, ಮಂಡ್ಯ 163, ಕೊಪ್ಪಳ 162, ಹಾಸನ 158, ವಿಜಯಪುರ 144, ಹಾವೇರಿ 138, ಯಾದಗಿರಿ 116, ಚಿಕ್ಕಮಗಳೂರು 104, ಬೀದರ 97, ಉತ್ತರಕನ್ನಡ ಹಾಗೂ ರಾಮನಗರ ತಲಾ 87, ಕೋಲಾರ 81, ಚಿತ್ರದುರ್ಗ 77, ಚಾಮರಾಜನಗರ 61, ಕೊಡಗು 60, ಚಿಕ್ಕಬಳ್ಳಾಪುರ 42, ಬೆಂಗಳೂರು ಗ್ರಾಮಾಂತರ 39 ಹೀಗೆ ಒಟ್ಟು 30 ಜಿಲ್ಲೆಗಳಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮೆರೆದಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸಾವಿನ ರಣಕೇಕೆ ರಾಜ್ಯದಲ್ಲಿ ಶುಕ್ರವಾರವೂ ಮುಂದುವರೆದಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 22 ಜನ ಸಾವನ್ನಪ್ಪಿದ್ದಾರೆ.
ಮೈಸೂರು 10, ಬಳ್ಳಾರಿ 9, ಧಾರವಾಡ 8, ದಾವಣಗೆರೆ ಹಾಗೂ ಉಡುಪಿ 7, ದಕ್ಷಿಣಕನ್ನಡ 6, ಕೊಪ್ಪಳ, ಕಲಬುರಗಿ ಹಾಗೂ ಬೆಳಗಾವಿ ತಲಾ 5, ತಲಾ ಶಿವಮೊಗ್ಗ 3, ರಾಯಚೂರು, ತುಮಕೂರು, ಹಾಸನ, ವಿಜಯಪುರ, ಹಾವೇರಿ ಹಾಗೂ ಚಾಮರಾಜನಗರ ತಲಾ 2, ಗದಗ, ಮಂಡ್ಯ, ಚಿಕ್ಕಮಗಳೂರು, ಬೀದರ, ಉತ್ತರಕನ್ನಡ ತಲಾ ಒಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.