ಬೆಂಗಳೂರು prajakiran.com : ಪೊಲೀಸರ ಮೇಲೆಯೇ ಗುಂಡಾಗಿರಿ ಮಾಡಿ ಜೈಲು ಸೇರಿದ್ದ ಪಾದರಾಯನಪುರ ಪುಂಡರಿಗೆ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಕೈ ಮುಗಿದು ಅದ್ದೂರಿ ಸ್ವಾಗತ ಕೋರಿದ ಘಟನೆ ಬುಧವಾರ ನಡೆದಿದೆ.
ಪಾದರಾಯನಪುರದ 126 ಆರೋಪಿಗಳಿಗೆ ನಿನ್ನೇಯಷ್ಟೇ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಇಂದು ಶಾಸಕ ಜಮೀರ್ ಅಹ್ಮದ್ ಖಾನ್ ಕೈ ಮುಗಿದು ಸ್ವಾಗತ, ಕೋರಿರುವುದು ವಿವಾದಕ್ಕೆ ಕಾರಣವಾಗಿದೆ.
ಅವರಿಗೆ ಈ ರೀತಿಯ ಆದರ ಆತಿಥ್ಯ ನೀಡಿ ಗ್ರ್ಯಾಂಡ್ ವೆಲ್ ಕಮ್ ಮಾಡುವ ಔಚಿತ್ಯವೇನಿತ್ತು ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಅಲ್ಲದೆ, ಅವರಿಗೆ ಹಜ್ ಭವನದಿಂದ ಕರೆದುಕೊಂಡು ಬರಲು ನ್ಯಾಶನಲ್ ಟ್ರಾವೆಲ್ಸ್ ನ ಮೂರು ಬಸ್ ಗಳನ್ನು ಶಾಸಕರು ವ್ಯವಸ್ಥೆ ಮಾಡಿದ್ದರು,
126 ಆರೋಪಿಗಳ ಬಿಡುಗಡೆ ಸ್ವಾಗತಕೋರಲು ಇವರೇನು ಸ್ವಾತಂತ್ರ್ಯ ಹೋರಾಟಗಾರರಾ ಯಾವ ಸಾಧನೆ ಮಾಡಿದರೆಂಬ ಕಾರಣಕ್ಕೆ ಈ ಸ್ವಾಗತ, ಅವರನ್ನು ಯುದ್ದದ ಸೇನಾನಿಗಳಂತೆ ವೆಲ್ ಕಮ್ ಮಾಡಿದ್ದು ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ಸ್ಥಳೀಯರು ಹಾಗೂ ಬೆಂಗಳೂರಿನ ಜನತೆ ಕೇಳುತ್ತಿದ್ದಾರೆ.
ಈ ಹಿಂದೆ ಪಾದರಾಯನ ಪುರದ ಪುಂಡರು ಕರೋನಾ ಸೇನಾನಿಗಳ ಮೇಲೆಯೇ ಪುಂಡಾಟ ಮಾಡಿದ್ದಲ್ಲದೆ, ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದರು. ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸಿಬ್ಬಂದಿಯನ್ನೇ ಎಳೆದಾಡಿ ದೌರ್ಜನ್ಯ ವೆಸಗಿದ್ದರು.
ಆಗ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಇವರ ಬೆಂಬಲಕ್ಕೆ ನಿಂತಿದ್ದ ಆರೋಪ ಕೇಳಿಬಂದಿತ್ತು.
ಈ ವೇಳೆ ಎಲ್ಲಾ 126 ಆರೋಪಿಗಳಿಗೆ ತಲಾ ಹತ್ತು ಸಾವಿರ ರೂ ಭಕ್ಷಿಸು ಹಾಗೂ ಆಹಾರ ಕಿಟ್ ನೀಡಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳಿಗೆ ಉಚಿತ ಸ್ಯಾನಿಟೇಸರ್ ಕೊಟ್ಟು ಸ್ವಾಗತ ಕೋರಿದ್ದಕ್ಕೆ ರಾಜ್ಯದೆಲ್ಲಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇದೇ ವೇಳೆ ಆರೋಪಿಗಳ ಸ್ವಾಗತಕ್ಕೆ ಕುಟುಂಬಸ್ಥರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರಿಂದ ಜನರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ರುಚಿ ತೋರಿಸಿದರು.
ಬಿಡುಗಡೆಗೊಂಡ ಬಳಿಕ ಕೆಲ ಪುಂಡರು, ನಮ್ಮ ಜೊತೆಗೆ ಶಾಸಕ ಜಮೀರ ಅಹ್ಮದ್ ಖಾನ್ ನಮ್ಮ ಜೊತೆಗೆ ಇರುವವರೆಗೆ ನಮಗೆ ಯಾರೂ ಏನು ಮಾಡಲ್ಲ ಎಂದು ಹೇಳಿ ಸೀಳ್ಳೆ, ಕೇಕೆ ಹೊಡೆದು ಸಂಭ್ರಮಿಸಿದ್ದು ಕಂಡು ಬಂತು.