ಧಾರವಾಡ prajakiran.com : ಮಹಾಮಾರಿ ಕರೋನಾ ಪಾಸಿಟಿವ್ ಇಡೀ ದೇಶದ ಹಾಗೂ ಕರುನಾಡಿನ ಪರಿಸ್ಥಿತಿಯನ್ನು ಬುಡಮೇಲು ಮೇಲು ಮಾಡಿ ಹಾಕಿದೆ.
ಧಾರವಾಡ ಜಿಲ್ಲೆಯ ಪರಿಸ್ಥಿತಿ ಕೂಡ ಭಿನ್ನ ವಾಗಿ ಉಳಿದಿಲ್ಲ.
ಪತಿ ಸಾವನ್ನಪ್ಪಿದ್ದ ಬೆನ್ನ ಹಿಂದೆಯೇ ಪತ್ನಿ ಕೂಡ ಸಾವಿನ ದಾರಿ ತುಳಿದಿದ್ದಾರೆ.
ಹೌದು ಇದು ಅಚ್ವರಿಯಾದರೂ ಸತ್ಯ.ಧಾರವಾಡದ ದಲಿತ ಸಮಾಜದ ಹಾಗೂ ಸಂಘಟನೆಯೊಂದರ (Achr) ಮುಖಂಡನಾಗಿದ್ದ ಪರಶುರಾಮ ಕೊರವರ ಮೇ 8 ರಂದು ಶನಿವಾರ ಕೋವಿಡ್ ಗೆ ಬಲಿಯಾಗಿದ್ದರು.
ಪತಿ, ಪತ್ನಿ ಇಬ್ಬರು ಕರೋನಾ ಪಾಸಿಟಿವ್ ಆಗಿ ಧಾರವಾಡ ಜಿಲ್ಲಾಸ್ಪತ್ರೆಗೆ ಕಳೆದ ವಾರವಷ್ಟೇ ದಾಖಲಾಗಿದ್ದರು.
ಆದರೆ ಚಿಕಿತ್ಸೆ ಫಲಿಸದೆ ಪರಶುರಾಮ ಕೊರವರ ಸಾವನ್ನಪ್ಪಿದ ಎರಡು ದಿನದ ನಂತರ ಪತ್ನಿ ರೇಣುಕಾ ಪರಶುರಾಮ ಕೊರವರ ಕೂಡ ಸೋಮವಾರ ಮೇ 10ರಂದು ಇಹಲೋಕ ತ್ಯಜಿಸಿದರು.
ಇದು ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಬಂಧು ಬಳಗಕ್ಕೆ ನೋವುಂಟು ಮಾಡಿದೆ.
ಇದು ಅನೇಕರನ್ನು ಮರಗುವಂತೆ ಮಾಡಿದ್ದು, ಕರೋನಾ ಎಲ್ಲರನ್ನೂ ಸಂಕಷ್ಟ ಹಾಗೂ ಸವಾಲು ಎದುರಿಸುವ ಸ್ಥಿತಿ ನಿರ್ಮಾಣ ಮಾಡಿರುವುದು ಸುಳ್ಳಲ್ಲ.