ಬೆಳಗಾವಿ prajakiran. com :
ಮಹಾಮಾರಿ ಕೊರೋನಾದಿಂದಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮೂವರು ಶಿಕ್ಷಕರು ಸಾವಿಗೀಡಾಗಿದ್ದಾರೆ.
ಕೇವಲ 2 ದಿನದ ಅಂತರದಲ್ಲಿ ಮೂವರು ಶಿಕ್ಷಕರು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.
ಖಾನಾಪುರ ತಾಲೂಕಿನ
ತೋಪಿನಕಟ್ಟಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ನಾರಾಯಣ ಕುಂಬಾರ (57) ಭಾನುವಾರ ಮೃತರಾದರೆ, ಡೊಂಗರಗಾಂವ್ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಮೋಹನ ದಿನಕರ ಮೇಸ್ತ್ರಿ (38) ಹಾಗೂ ಶಿಕ್ಷಣ ಸಂಯೋಜಕ ಉಮೇಶ ಬಿರಾದಾರ (38) ಸೋಮವಾರ ಮೃತರಾಗಿದ್ದಾರೆ.
ಇದು ಇಡೀ ಬೆಳಗಾವಿ ಜಿಲ್ಲೆಯ
ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಲ್ಲಿ ಆತಂಕವುಂಟು ಮಾಡಿದೆ.