ಧಾರವಾಡ prajakiran.com : ಬೆಂಗಳೂರು ಮೂಲದ ಪಿಎಸ್ಐಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಿಎಸ್ಐ ಭೇಟಿ ನೀಡಿದ್ದ ಪೊಲೀಸ್ ಠಾಣೆಗೆ ಸ್ಯಾನಿಟೈಸೇಶನ್ ಮಾಡಲಾಗಿದೆ.
ಧಾರವಾಡದ ಉಪನಗರ ಠಾಣೆಗೆ ಭೇಟಿ ನೀಡಿದ್ದ ಸೋಂಕಿತ ಪಿಎಸ್ಐ ಅಲ್ಲಿಯ ಸ್ಥಳೀಯ ಪಿಎಸ್ಐ ಒಬ್ಬರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ನಡೆಸಿ, ಸೋಂಕಿತ ಪಿ ಎಸ್ ಐ ಅವರು ತಮ್ಮ ಮದುವೆ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಆಗಮಿಸುವಂತೆ ಕೋರಿದ್ದರು.
ಅದಕ್ಕಾಗಿ ಧಾರವಾಡದ ಉಪನಗರ ಪೊಲೀಸ್ ಠಾಣೆ ಪಿಎಸ್ಐಗೂ ಇದೀಗ ಧಾರವಾಡ ಜಿಲ್ಲಾಡಳಿತ ಕ್ವಾರೈಂಟಿನ್ ಮಾಡಿದೆ.
ಅಲ್ಲದೆ, ಧಾರವಾಡದ ಉಪನಗರ ಪೊಲೀಸ್ ಠಾಣೆ ಪಿಎಸ್ಐ ಅವರನ್ನು ಗಂಟಲು ತಪಾಸಣೆ ಮಾಡಿದ್ದು, ಕೋವಿಡ್ ಟೆಸ್ಟ್ಗೆ ರವಾನೆ ಮಾಡಲಾಗಿದೆ.
ಕರೋನಾ ವರದಿ ನೆಗೆಟಿವ್ ಬರುತ್ತಾ ಇಲ್ಲವೇ ಪಾಸಿಟಿವ್ ಬರುತ್ತಾ ಎಂಬ ಆತಂಕದಲ್ಲಿ ಧಾರವಾಡ ಉಪನಗರ ಪೊಲೀಸ್ ಠಾಣೆ ಪಿ ಎಸ್ ಐ ಜೊತೆಗೆ ಸಂಪರ್ಕದಲ್ಲಿದ್ದ ಪೊಲೀಸ್ ಸಿಬ್ಬಂದಿ ಆತಂಕದಲ್ಲಿದ್ದಾರೆ.