ಧಾರವಾಡ prajakiran.com : ಮಹಾಮಾರಿ ಕರೋನಾ ಸೋಂಕು ಧಾರವಾಡ ಜಿಲ್ಲೆಯ ಸಿಆರ್ ಪಿ ಎಫ್ ಯೋಧರೊಬ್ಬರಿಗೆ ತಗುಲಿರುವುದು ದೃಢಪಟ್ಟಿದೆ.
ಪಿ-೫೯೭೨ನೇ ಸೋಂಕಿತ ಸಿ ಆರ್ ಪಿ ಎಫ್ ರಾಗಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಿಂದ ಹಿಂದಿರುಗಿದ್ದ ೪೦ ವರ್ಷದ ಸಿಆರ್ ಪಿಎಫ್ ಯೋಧನಿಗೆ ಸೋಂಕು ದೃಢವಾಗಿರುವುದು ಅಣ್ಣಿಗೇರಿ ಪಟ್ಟಣದ ಜನತೆಯನ್ನು ಬೆಚ್ಚಿಬಿಳಿಸಿದೆ.
ಅವರಿಗೆ ನಿನ್ನೆ ಸೋಂಕು ಹರಡಿರುವುದು ಖಚಿತ ಪಟ್ಟ ತಕ್ಷಣಅವರನ್ನು ಹುಬ್ಭಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಧಾರವಾಡ ಜಿಲ್ಲಾಡಳಿತ ದೃಢಪಡಿಸಿದೆ.
ಸಿಆರ್ ಪಿ ಎಫ್ ಯೋಧನಿಗೆ ಕರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಅಣ್ಣಿಗೇರಿ ಪಟ್ಟಣದ ಅಮೃತೇಶ್ವರ ನಗರವನ್ನು ಧಾರವಾಡ ಜಿಲ್ಲಾಡಳಿತದ ಆದೇಶದ ಮೇರೆಗೆ ಅಣ್ಣಿಗೇರಿ ತಾಲೂಕು ಆಡಳಿತ ಸೀಲ್ ಡೌನ ಮಾಡಿದೆ.
ಅಣ್ಣಿಗೇರಿ ಪಟ್ಟಣದಅಮೃತೇಶ್ವರ ನಗರ ಇಡೀ ಬಡಾವಣೆವನ್ನು ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಸೀಲ್ ಡೌನ್ ಮಾಡಿದೆ.
ಧಾರವಾಡ ಜಿಲ್ಲೆಯಲ್ಲಿ ಈವರೆಗೆ 70 ಜನರಿಗೆ ಕರೋನಾ ಸೋಂಕು ವಕ್ಕರಿಸಿದ್ದು, ಮೊಟ್ಟ ಮೊದಲ ಬಾರಿಗೆ ಸಿ ಆರ್ ಪಿಎಫ್ ಯೋಧರೊಬ್ಬರಿಗೆ ಹರಡಿರುವುದು ಜಿಲ್ಲೆಯ ಜನತೆಗೆ ಆತಂಕ ತಂದಿದೆ.