ಅಪರಾಧ

ಲಾಕ್‌ಡೌನ್ ಉಲ್ಲಂಘಿಸಿದ  ಧಾರವಾಡ ಕಾಂಗ್ರೆಸ್ ಮುಖಂಡರ ವಿರುದ್ದ ದೂರು ದಾಖಲು

ಧಾರವಾಡ prajakiran.com : ಕರೋನಾ ಲಾಕ್‌ಡೌನ್ ನಿಷೇಧಾಜ್ಞೆ ಆದೇಶ ಉಲ್ಲಂಘಿಸಿ ಜನುಮ ದಿನಕ್ಕಾಗಿ ಬೃಹತ್ ಪೆಂಡಾಲ್ ಹಾಕಿ, ಸಮಾರಂಭ ಆಯೋಜಿಸಿದ್ದ ಧಾರವಾಡ ಕಾಂಗ್ರೆಸ್ ಮುಖಂಡರ ವಿರುದ್ದ ದೂರು ದಾಖಲು  ಆಗಿದೆ.

ಈ ಘಟನೆ ವಿದ್ಯಾನಗರಿ ಧಾರವಾಡದ ತಡಸಿನಕೊಪ್ಪದಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.  

ಈ ಕಾರ್ಯಕ್ರಮ ನಡೆಯುವ ಮುನ್ನವೇ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಪೊಲೀಸರು ಘಟನಾ ಸ್ಥಳದ ಮೇಲೆ ದಾಳಿ ನಡೆಸಿ   ಪೆಂಡಾಲ್  ಹಾಗೂ ಸೌಂಡ್ ಬ್ಯಾಕ್ಸ್ ಸೀಜ್ ಮಾಡಿಕೊಂಡು ಬಂದಿದ್ದಾರೆ.



ಅಲ್ಲದೆ, ಐವರ ವಿರುದ್ದ ಧಾರವಾಡದ ವಿದ್ಯಾಗಿರಿ ಪೊಲೀಸರು ದೂರು ದಾಖಲಿಸಿಕೊಂಡು ಸರಿಯಾಗಿ  ಬಿಸಿ ತಾಕಿಸಿದ್ದಾರೆ.

ಹನುಮಂತಪ್ಪ ಕೊರವರ  ಅವರು ಕಾಂಗ್ರೆಸ್ ಮುಖಂಡರಾಗಿದ್ದು, ಧಾರವಾಡದ ತಡಸಿನಕೊಪ್ಪದಲ್ಲಿ ಪೆಂಡಾಲ್ ಹಾಕಿ ಯುವಕರ ಗುಂಪಿಗೆ ಪಾರ್ಟಿ ಆಯೋಜಿಸಿದ್ದರು.

ಏ 1. ಹನಮಂತಪ್ಪ ಕೊರವರ, ನವಲೂರಿನ ಆತ್ಮಾನಂದ ತಳವಾರ, ಮಲ್ಲಿಕಾರ್ಜುನ, ಪ್ರವೀಣ, ಮಂಜುನಾಥ ಎಂಬುವವರ ಮೇಲೆ  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದರಲ್ಲಿ ಇನ್ನೂ ಹೆಚ್ಚಿನ ಜನರು ಭಾಗವಹಿಸಿದ್ದ ಶಂಕೆ ಇದ್ದು, ವಿದ್ಯಾಗಿರಿ ಠಾಣೆಯ ಪೊಲೀಸರು ತನಿಖೆ ನಡೆಸಿತ್ತಿದ್ದಾರೆ ಎಂದು ತಿಳಿದುಬಂದಿದೆ. 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *