ಬೆಂಗಳೂರು prajakiran.com : ಸಿಸಿಬಿ ಪೊಲೀಸ್ ತಂಡ ಒಂದು ತಿಂಗಳಿಂದ ಡ್ರಗ್ಸ್ ಜಾಲದ ಮಾಹಿತಿ ಆಧರಿಸಿ ನಿರಂತರ ತನಿಖೆ ನಡೆಸುತ್ತಿದ್ದಾರೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ವಿವರಿಸಿದರು.
ಅವರು ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಕೂಡ ಗಾಂಜಾ ಕೇಸ್ ಪತ್ತೆ ಮಾಡಿದ್ದರು ಎಂದರು.
ಆರ್ ಟಿ ಒ ಜಯನಗರ ಕಚೇರಿಯಲ್ಲಿ ಕ್ಲರ್ಕ್ ಆಗಿ ಕೆಲಸ ನಿರ್ವಹಿಸುತ್ತಿದ್ದ ರವಿಶಂಕರ್ ನಟಿ ಜೊತೆ ಸಂಪರ್ಕ ಇದೆ ಎಂಬುದು ಪತ್ತೆಯಾಗಿದೆ.
ಆತನ ಮೇಲೆ ನಿಗಾ ಇಟ್ಟು ಪರಿಶೀಲನೆ ನಡೆಸಿದಾಗ ಪೋನ್ ಪರಿಶೀಲಿಸಿದಾಗ ಸುಮಾರು ಮಾಹಿತಿ ಸಿಕ್ಕಿವೆ ಎಂದರು.
ಅವರ ದೀರ್ಘ ವಿಚಾರಣೆ ಬಳಿಕ ಪಾರ್ಟಿ ಹೋಗಿರುವುದನ್ನು ಒಪ್ಪಿಕೊಂಡಿದ್ದಾರೆ. ಡ್ರಗ್ಸ್ ತೆಗೆದುಕೊಂಡಿರುವುದು ಜೊತೆಗೆ ಪಾರ್ಟಿಗಳಿಗೆ ಬಂದಿರುವ ಹಾಗೂ ಹೋಗಿರುವ ಮಾಹಿತಿ ನೀಡಿದ್ದಾರೆ ಎಂದು ವಿವರಿಸಿದರು.
ಅವರಿಗೂ ವಿಚಾರಣೆಗೆ ಕರೆಸುತ್ತಿದ್ದೇವೆ. ಜೊತೆಗೆ ಅವರೊಂದಿಗೆ ತಮ್ಮ ಸಂಬಂಧ ಬಹಿರಂಗ ಪಡಿಸಿದ್ದಾರೆ. ಹೀಗಾಗಿ ಎರಡನೇ ಹಂತದ ವಿಚಾರಣೆ ನಡೆಸಲಾಗುವುದು.
ಪಾರ್ಟಿ ಆಯೋಜನೆ ಮಾಡಿರುವವರ ಹಾಗೂ ಸಂಘಟನೆ ಮಾಡಿದವರ ವಿಚಾರಣೆ ಹಾಜರಾಗಲು ನೋಟಿಸ್ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಜೊತೆಗೆ ಇನ್ನೊಬ್ಬ ನಟಿ ಸಂಜನಾ ಗಲ್ರಾನಿ ರಾಖಿ ಸಹೋದರ ರಾಹುಲ್ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಹೇಳಿಕೊಂಡಿದ್ದಾರೆ.
ಆದರೆ ಅವರು ನೆರೆ ರಾಷ್ಟ್ರ ಹಾಗೂ ಬೆಂಗಳೂರು ಸೇರಿದಂತೆ ಹಲವು ಕಡೆ ನಡೆದ ಡ್ರಗ್ಸ್ ದಂಧೆಯಲ್ಲಿ ಶಾಮೀಲು ಆಗಿದ್ದಾರೆ.
ಹೀಗಾಗಿ ಅವರನ್ನು ದಸ್ತಗಿರಿ ಮಾಡಲಾಗಿದೆ. ಅವರ ಜೊತೆಗೆ ಸಂಪರ್ಕ ಇದ್ದವರು. ಭಾಗವಹಿಸಿದವರ ವಿಚಾರಣೆ ನಡೆಸಲಾಗುವದು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ವಿವರಿಸಿದರು.
ಇದೇ ವೇಳೆ ನಟಿ ರಾಗಿಣಿ ದ್ವಿವೇದಿ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಹೆಚ್ಚಿನ ಮಾಹಿತಿಗಾಗಿ ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಈಗಲೇ ಎನ್ನನ್ನೂ ಹೇಳಲಾಗುವುದಿಲ್ಲ. ವಿಚಾರಣೆ ಪೂರ್ಣಗೊಂಡ ನಂತರ ಮಾಹಿತಿ ಬಹಿರಂಗ ಪಡಿಸಲಾಗುವುದು ಎಂದರು.