ಧಾರವಾಡ prajakiran.com : ಪರಿಶಿಷ್ಠ ಪಂಗಡದ ಮಹಿಳೆಯೊಬ್ಬರಿಗೆ ಜಾತಿ ನಿಂದನೆ ಮಾಡಿ, ದೈಹಿಕವಾಗಿ ಹಲ್ಲೆ ಮಾಡಿದ ಘಟನೆ ಧಾರವಾಡ ತಾಲೂಕಿನ ಹಿರೇ ಮಲ್ಲಿಗವಾಡ ಗ್ರಾಮದಲ್ಲಿ ಕಳೆದ ದಿ.೮ ರಂದು ನಡೆದಿದೆ.
ಪರಿಶಿಷ್ಠ ಪಂಗಡಕ್ಕೆ ಸೇರಿದ ಸುಶೀಲವ್ವ ಹನಮಂತಪ್ಪ ಚೌರದ ಎಂಬ ಮಹಿಳೆಗೆ ಅದೇ ಗ್ರಾಮದ ‘ಕೌಶಲ್ಯ ಸುಭಾಸ ಪಾಟೀಲ ಹಲ್ಲೆ ಮಾಡಿದ್ದಾರೆ.
ಸುಶೀಲವ್ವ ಚೌರದ ಅವರಿಂದ ೧೧.೧೦.೨೦೨೧ ರಂದು ೨ ಲಕ್ಷ ರೂಪಾಯಿಗಳಲ್ಲು ಕೈಗಡ ಪಡೆದಿದ್ದ ‘ಕೌಶಲ್ಯ ಪಾಟೀಲರನ್ನು ಸಾಲ ವಾಪಸ್ಸು ಕೊಡುವಂತೆ ಕಳೆದ ದಿ.೮ ರಂದು ಕೇಳಲು ಮನೆಗೆ ಹೋದಾಗ ಜಾತಿನಿಂದನೆ ಮತ್ತು ಹಲ್ಲೆ ಮಾಡಲಾಗಿದೆ ಎಂದು ದೂರಲಾಗಿದೆ.
ಈ ಕುರಿತು ಸುಶೀಲವ್ವ ಚೌರದ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.