ನವದೆಹಲಿ prajakiran.com : ಕೇಂದ್ರದ ಮಾಜಿ ಸಚಿವ ಪಿ. ರಂಗರಾಜನ್ ಕುಮಾರಮಂಗಲಂ ಅವರ ಪತ್ನಿ ಕಿಟ್ಟಿ ಕುಮಾರಮಂಗಲಂ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಈ ಘಟನೆ ದೆಹಲಿಯ ವಸಂತವಿಹಾರ ಪ್ರದೇಶದಲ್ಲಿ ಇರುವ ಕಿಟ್ಟಿ ಅವರ ಮನೆಯಲ್ಲಿಯೇ ನಡೆದಿದೆ.
ಮನೆಯ ಕೆಲಸದವರಿಂದಲೇ ಈ ಕೃತ್ಯ ನಡೆದಿದ್ದು, ವೃತ್ತಿಯಲ್ಲಿ ಲಾಯರ್ ಆಗಿರುವ ಕಿಟ್ಟಿ ಅವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಿಟ್ಟಿ ಅವರ ನಿವಾಸದಲ್ಲಿಯೇ ಕೆಲಸ ಮಾಡುತ್ತಿದ್ದ ರಾಜು ಲಕ್ಕನ್ ರಾತ್ರಿ ತನ್ನ ಸಹಚರರೊಂದಿಗೆ ಮನೆಗೆ ನುಗ್ಗಿದ್ದಾನೆ.
ಮನೆಯಲ್ಲಿ ಮಂಜು ಎಂಬ ಮಹಿಳೆಯಿದ್ದು, ಆಕೆಯನ್ನು ರೂಮಿನಲ್ಲಿ ಕೂಡಿ ಹಾಕಿ, ಕಿಟ್ಟಿ ಅವರ ಮುಖಕ್ಕೆ ದಿಂಬು ಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಆ ಬಳಿಕ ಹಣ,ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.