ಧಾರವಾಡ prajakiran.com :
ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಸಹೋದರರಾದ ಈರಪ್ಪ ಮಡಿವಾಳಪ್ಪ ದೇಶಣ್ಣವರ ಮತ್ತು ಶೇಖರಪ್ಪ ಮಡಿವಾಳಪ್ಪ ದೇಶಣ್ಣವರ ನಡುವೆ ಆಸ್ತಿ ಹಂಚಿಕೆಯ ವಿಷಯದಲ್ಲಿ ಮನಸ್ತಾಪವಾಗಿತ್ತು.
ಆರೋಪಿಯು ಈರಪ್ಪನ ಕೊಲೆ ಮಾಡುವ ಉದ್ದೇಶದಿಂದ ದಿ : 31-1 2015 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ , ನರೇಂದ್ರ ಗ್ರಾಮದಲ್ಲಿ ತಾಯಿ ಮನೆಯ ಕಡೆಗೆ ಹೊರಟಿದ್ದಾಗ ಆರೋಪಿಗಳಾದ ಶೇಖಪ್ಪ ಮಡಿವಾಳಪ್ಪ ದೇಶಣ್ಣವರ ಮತ್ತು ಹಾಗೂ ಈರಣ್ಣ ಕೂಡಿಕೊಂಡು ಬೈದಾಡುತ್ತಾ ಅಡ್ಡ ಗಡಿ ನಿಲ್ಲಿಸಿ , ಶೇಖಪ್ಪನು ತನ್ನ ಕೈಯಲ್ಲಿದ್ದ ಕೋಯಿತಾದಿಂದ ಈರಪ್ಪನ ತಲೆಗೆ ಹೊಡೆದ್ದಲ್ಲದೇ ಅರೊಪಿತನಾದ ಈರಣ್ಣ @ ಈರನು ಸೈಕಲ್ ಚೈನದಿಂದ ಈರಪ್ಪನ ಕುತ್ತಿಗೆಗೆ ಹಾಕಿದ್ದಲ್ಲದೆ, ಕಲ್ಲನ್ನು ಎತ್ತಿ ಅವನ ತಲೆಯ ಮೇಲೆ ಹಾಕಿ ಗಾಯಪಡಿಸಿ ಕೊಲೆ ಮಾಡಿದ ಅಪರಾಧ ವಿಚಾರಣೆ ವೇಳೆ ಸಾಬಿತಾಗಿದೆ.
ಧಾರವಾಡದ 2ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ
ನ್ಯಾಯಾಧೀಶರಾದ ಶ್ರೀಮತಿ ಪಂಚಾಕ್ಷರಿ ಎಂ. ಇವರು ಆರೋಪಿತರಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ಜ.20 ರಂದು ಮಹತ್ವದ ತೀರ್ಪು ನೀಡಿದ್ದಾರೆ.
ಪ್ರಕರಣದ ಕುರಿತು ಧಾರವಾಡ ಗ್ರಾಮೀಣ ಸಿ.ಪಿ ಐ ಮೋತಿಲಾಲ್ ಪವಾರ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಶ್ರೀಮತಿ ಸರೋಜಾ ಹೊಸಮನಿ ವಾದ ಮಂಡಿಸಿದರು.