ಧಾರವಾಡ prajakiran.com : ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿಯನ್ನು ಖಂಡಿಸಿ ದಿ. 26 ರಂದು ಬೃಹತ್ ಟ್ರಾಕ್ಟರ್ ಜಾಥಾ ಹಮ್ಮಿಕೊಳ್ಳಲು ನಗರದ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಬುಧವಾರ ಜರುಗಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.
ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್. ನೀರಲಕೇರಿ ಅವರ ಮುಂದಾಳತ್ವದಲ್ಲಿ ಕರೆದಿದ್ದ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಜ.26 ರಂದು ಟ್ರ್ಯಾಕ್ಟರ್ ಜಾಥಾ ನಡೆಸಿ ದಿನವಿಡೀ ಹೋರಾಡುವುದು.
ರೈತರ ಎಲ್ಲ ಬೆಳೆಗಳ ಮೇಲೆ ಎಂ ಎಸ್ ಪಿ ವೈಜ್ಞಾನಿಕವಾಗಿ ನಿಗದಿಪಡಿಸಬೇಕು. ಎಲ್ಲ ಕೃಷಿ ವಿರೋಧಿ ಕಾನೂನುಗಳ ಹಿಂಪಡೆಯುವಂತೆ ಮತ್ತು ತೈಲ ಬೆಲೆ ಕಡಿಮೆ ಮಾಡುವಂತೆ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರವುದು.
ಈ ದಿಸೆಯಲ್ಲಿ ಅತ್ಯಂತ ಪರಿಣಾಮಕಾರಿ ರೈತ ಆಂದೋಲನ ನಡೆಸುವದು, ರೈತರ ಬೇಡಿಕೆಗಳು ಈಡೇರುವರೆಗೂ ಪಕ್ಷಾತೀತವಾಗಿ ನಿರಂತ ಹೋರಾಟ ಮುಂದುವರೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೇಂದ್ರದ ಮಾಜಿ ಸಚಿವ
ಬಾಬಾಗೌಡ ಪಾಟೀಲ, ಭಾಷಾ ವಿಜ್ಞಾನಿ ಡಾ.ಜಿ.ಎನ್.ಗಣೇಶ ದೇವಿ, ಪ್ರೊ.ಐ.ಜಿ.ಸನದಿ, ಶಿವಾನಂದ ಹೊಳೆಹಡಗಲಿ, ಗಂಗಾಧರ ಪಾಟೀಲ ಕುಲಕರ್ಣಿ, ಗುರುರಾಜ್ ಹುಣಸಿಮರದ, ಶಿವಾನಂದ ಅಂಬಡಗಟ್ಟಿ,ಬಿ.ಎಸ್.ಸೊಪ್ಪಿನ, ಮಹೇಶ ಪತ್ತಾರ, ಶಂಕರ ಹಲಗತ್ತಿ,
ಡಾ. ಸಂಜೀವ ಕುಲಕರ್ಣಿ, ಸಿದ್ದಣ್ಣ ಕಂಬಾರ, ಶ್ರೀಶೈಲಗೌಡ ಕಮತರ, ಉಳವಪ್ಪ ಒಡೆಯರ, ಅಶ್ರಫ್ ಅಲಿ, ಎ.ಎಂ.ಖಾನ ಇನ್ನಿತರರು ಸಭೆಯಲ್ಲಿದ್ದರು.