ಬೆಂಗಳೂರು prajakiran.com : ಬೆಂಗಳೂರಿನ ಪುಲಕೇಶಿ ನಗರ ಕಾಂಗ್ರೆಸ್ ಶಾಸಕಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಿದ ಆರು ಜನ ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಬೆಂಗಳೂರು ಪೊಲೀಸರು, ನಾಪತ್ತೆಯಾಗಿರುವ ಇನ್ನುಳಿದ 40 ಜನ ಗ್ಯಾಂಗ್ ಲೀಡರ್ ಗಳ ಹುಡುಕಾಟ ನಡೆಸುತ್ತಿದ್ದಾರೆ.
ಬಂಧಿತರಲ್ಲಿ ಕೆಲವು ಪ್ರಮುಖ ಎಸ್ ಡಿ ಪಿ ಐ ಕಾರ್ಯಕರ್ತರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಲ್ಲದೆ, ಪೊಲೀಸರ ಫೈರಿಂಗ್ ವೇಳೆ ಗಾಯಗೊಂಡಿದ್ದ 30 ಜನರನ್ನು ಕೂಡ ಹುಡುಕಾಟ ನಡೆಸಲಾಗುತ್ತಿದೆ. ಆರು ಜನ ಆಸ್ಪತ್ರೆಯಿಂದಲೇ ಪರಾರಿಯಾಗಿದ್ದಾರೆ.
ಅವರನ್ನು ಹೇಗಾದರೂ ಬಂಧಿಸಲೇಬೇಕು ಎಂದು ಪೊಲೀಸರು ಆಸ್ಪತ್ರೆ, ದರ್ಗಾ ಮೇಲೂ ತೀವ್ರ ನಿಗಾವಹಿಸಿದ್ದಾರೆ.
ಬೆಂಗಳೂರಿನ ಬೇರೆ ಬೇರೆ ಸ್ಥಳಗಳಿಂದ ಗಲಭೆಕೋರರನ್ನ ಕರೆಸಿ, ಅವರಿಗೆ ಕೋಮು ಪ್ರಚೋದನೆ, ಆರ್ಥಿಕ ನೆರವು ನೀಡಿರುವ ಆರೋಪಿಗಳಿಗೂ ಶೋಧ ಕಾರ್ಯ ಮುಂದುವರೆದಿದೆ.
ಈವರೆಗೆ ಒಟ್ಟು ಡಿ.ಜೆ. ಹಳ್ಳಿ ಹಾಗೂ ಕೆ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಒಟ್ಟು 36, 37 ಕೇಸ್ ದಾಖಲಾಗಿದೆ.
ಈವರೆಗೆ ಒಟ್ಟು ಈ ಸಂಬಂಧ 298 ಜನರನ್ನು ಬಂಧನ ಮಾಡಲಾಗಿದೆ. ಒಟ್ಟು 200 ಜನರನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದರೆ, ಇನ್ನುಳಿದ 90 ಜನರನ್ನು ಡಿಜೆಹಳ್ಳಿ. ಕೆಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಇದಲ್ಲದೆ, ಒಟ್ಟು 46 ಜನ ಪ್ರಮುಖ ಆರೋಪಿಗಳ ಪೈಕಿ ಆರು ಜನರನ್ನು ಬಂಧಿಸಿ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ.
ಈ ಪ್ರಕರಣದಲ್ಲಿ ಕೆಲವರು ಕಲ್ಲು ತೂರಾಟ ನಡೆಸಿದರೆ, ಇನ್ನು ಕೆಲವರು ಬೆಂಕಿ ಹಚ್ಚಿದರೆ, ಕೆಲವರು ಮನೆಗಳ ಮೇಲೆ ದಾಳಿ ಮಾಡಿ ದೋಚಲಾಗಿತ್ತು.
ಪ್ರಕರಣದ ಪ್ರಮುಖ ಆರೋಪಿ ಎಸ್ ಡಿ ಪಿ ಐ ಮುಖಂಡ ಮುಜಾಮೀಲ್ ಪಾಷಾ ನನ್ನು ಈಗಾಗಲೇ ಬಂಧಿಸಿ ಹೆಡೆಮುರಿ ಕಟ್ಟಲಾಗಿದೆ.
ಇದೇ ವೇಳೆ ಇನ್ನೊಬ್ಬ ಬಂಧಿತ ಆರೋಪಿ ಫೈರೋಜ್ ಪಾಶಾ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ, ರಾಜಸ್ತಾನ ಸಿಎಂ ಅಶೋಕ ಗ್ಲೆಹೋಟ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರ ಜೊತೆಗೆ ಪೋಟೋ ತೆಗೆಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.