ರೌಡಿಶೀಟರ್ ಫ್ರೂಟ್ ಇರ್ಫಾನ್ ಸಹಚರ ಮಹ್ಮದ್ ಕುಡಚಿ ಮರ್ಡರ್
ರೌಡಿಶೀಟರ್ ಆಗಿದ್ದ ಮಹ್ಮದ್ ಕುಡಚಿ ಫ್ರೂಟ್ ಹೆಸರಿನಲ್ಲಿ ಕೋಟಿ ಕೋಟಿ ಸಂಪಾದನೆ ಮೇಲೆ ಕಣ್ಣು ಹಾಕಿದ್ದ ಅರ್ಬಾಜ್
ಕುಡಚಿ ಜೊತೆಗೆ ಇನ್ನೊಬ್ಬನ ಮರ್ಡರ್
ಜೋಡಿ ಕೊಲೆಗೆ ಬೆಚ್ಚಿ ಬಿದ್ದ ಧಾರವಾಡ ಮಂದಿ
ಧಾರವಾಡ ಪ್ರಜಾಕಿರಣ.ಕಾಮ್ : ಹುಬ್ಬಳ್ಳಿ-ಧಾರವಾಡ ಅವಳಿನಗರವನ್ನ ಬೆಚ್ಚಿಬೀಳಿಸಿದ್ದ ರೌಡಿಶೀಟರ್ ಫ್ರೂಟ್ ಇರ್ಫಾನ್ ಸಹಚರ ಮಹ್ಮದ್ ಕುಡಚಿಯನ್ನು ತಡರಾತ್ರಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಈ ಮರ್ಡರ್ ವೇಳೆ ಗಣೇಶ್ ಎಂಬಾತನನ್ನು ಕೂಡ ಕೊಲೆ ಮಾಡಲಾಗಿದೆ. ಕೊಲೆಗೆ ಈವರೆಗೂ ನಿಖರ ಕಾರಣ ತಿಳಿದುಬಂದಿಲ್ಲ.
ಮಾಹಿತಿಯನ್ನು ಅರಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅವಳಿನಗರ ಪೊಲೀಸ್ ಆಯುಕ್ತ ರಮಣಗುಪ್ತ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೌಡಿಶೀಟರ್ ರ್ಫ್ರೂಟ್ ಇರ್ಫಾನ್ ಜೊತೆಗೆ ಗುರುತಿಸಿಕೊಂಡಿದ್ದ ಮಹ್ಮದ್ ಕುಡಚಿ ಸಹ ವಿದ್ಯಾಗಿರಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ.
ಇತ ಫ್ರೂಟ್ ಇರ್ಫಾನ್ ಸಹಚರನಾಗಿದ್ದ. ಆತನ ಹೆಸರಿನಲ್ಲಿ ಕೋಟಿ ಕೋಟಿ ಸಂಪಾದನೆ ಮಾಡಿ ಆತನ ಕೊಲೆಯ ನಂತರ ಕೈ ಎತ್ತಿದ್ದ ಎಂಬ ಆರೋಪ ಆತನ ಪುತ್ತ ಅರ್ಬಾಜ್ ಆರೋಪವಾಗಿತ್ತು.
ಇದರಿಂದಾಗಿ ರೊಚ್ಚಿಗೆದ್ದ ಆತನ ಪುತ್ರ ಅರ್ಬಾಜ್ ಈ ಹಿಂದೆ ಒಮ್ಮೆ ಹಲ್ಲೆಗೆ ಯತ್ನಿಸಿದ್ದ. ಆದರೆ ಅದು ಕೈ ಗೂಡಿರಲಿಲ್ಲ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಿನ್ನೆ ರಾತ್ತಿ ಬಂದೂಕು ಸಮೇತ ಬಂದು ಕಣ್ಣಿಗೆ ಖಾರಪುಡಿ ಎರಚಿ ಹಲ್ಲೆ ಮಾಡಿ, ಗುಂಡು ಹಾರಿಸಿ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಮಹ್ಮದ್ ಕುಡಚಿ ಮಗ ಧಾರವಾಡ ಉಪನಗರ ಪೊಲೀಸರಿಗೆ ದೂರು ನೀಡಿದ್ದಾನೆ.
ಕುಡಚಿ ಜೊತೆಗೆ ಇನ್ನೊಬ್ಬನ ಮರ್ಡರ್ ಆಗಿದ್ದು, ಆತನನ್ನು ಗಣೇಶ್ ಎಂದು ಗುರುತಿಸಲಾಗಿದೆ. ಆತನ ಕಾಲು ರಕ್ತಸಿಕ್ತವಾಗಿತ್ತು. ಕುಡಚಿ ಮನೆಯಿಂದ ಓಡಿಹೋಗುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.
ಇತನ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಅಲ್ಲದೆ, ಇತ ಮಹ್ಮದ್ ಕುಡಚಿ ಕಡರಯವನಾ ಅಥವಾ ಕೊಲೆ ಮಾಡಲು ಬಂದ ತಂಡದವರ ಜೊತೆಗೆ ಬಂದಿದ್ದನಾ ಎಂಬುದು ತಿಳಿದುಬರಬೇಕಾಗಿದೆ.
ಜೋಡಿ ಕೊಲೆಗೆ ಧಾರವಾಡದ ಕಮಲಾಪುರ ಭಾಗದ ಜನತೆ ಹಾಗೂ ಸುತ್ತಮುತ್ತಲಿನ ಮಂದಿ ಬೆಚ್ಚಿ ಬಿದ್ದಿದ್ದಾರೆ.