ಧಾರವಾಡ prajakiran. com : ವಾಹನಗಳನ್ನು ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಧಾರವಾಡ ಶಹರ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಹುಬ್ಬಳ್ಳಿ ಮೂಲದ ಮುಜಾಮಿಲ್ ಖಾಜಿ ಎಂಬಾತನೇ ಬಂಧಿತ ಆರೋಪಿ. ಈತನಿಂದ ಒಂದು ಕಾರು ಮತ್ತು ೭ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಬೆಳಗಾವಿ, ಸವದತ್ತಿ, ಧಾರವಾಡ ಮತ್ತಿತರ ಕಡೆಗಳಲ್ಲಿ ವಾಹನಗಳನ್ನು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದನು.
ನಿನ್ನೆ ಈತನನ್ನು ವನಿತಾ ಸಮಾಜ ಶಾಲೆಯ ಬಳಿ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಮಾಡಿದ್ದು ಗೊತ್ತಾಗಿದೆ.
ಸಿಪಿಐ ಸಂಗಮೇಶ ದಿಡಿಗನಾಳ ಅವರ ನೇತೃತ್ವದಲ್ಲಿ ಪಿಎಸ್ಐ ಎಲ್.ಕೆ.ಕೋಡಬಾಳ, ಎಎಸ್ಐ ಪಿ.ಬಿ.ಕಾಳೆ, ಸಿಬ್ಬಂದಿಗಳಾದ ಡಿ.ವೈ.ಮನ್ನಿಕೇರಿ, ಜಿ.ಜಿ.ಚಿಕ್ಕಮಠ, ಉಮೇಶ ಸಣ್ಣಲಿಂಗನ್ನವರ, ಲಕ್ಷ್ಮಣ ಲಮಾಣಿ ಮತ್ತು ಆರ್.ಎಸ್.ಕಿರಜಂಟನವರ ತನಿಖೆ ಕೈಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.