ಅಪರಾಧ

ಧಾರವಾಡದ ರೌಡಿಶೀಟರ್ ಮಹ್ಮದ್ ಕುಡಚಿ ಕೊಂದ 6 ಆರೋಪಿಗಳ ಬಂಧನ

ಧಾರವಾಡದ ರೌಡಿಶೀಟರ್ ಮಹ್ಮದ್ ಕುಡಚಿ ಕೊಂದ 6 ಆರೋಪಿಗಳ ಬಂಧನ

36 ಗಂಟೆಗಳಲ್ಲಿ ಮಿಂಚಿನ ಕಾರ್ಯಾಚರಣೆ

ಫ್ರೂಟ್ ಇರ್ಫಾನ್ ಮಗ. ಅರ್ಬಾಜ್ , ರಹೀಂ ಹಾಗೂ ನಾಲ್ಕು ಸಹಚರರ ಹೆಡೆಮುರಿ ಉಪನಗರ ಪೊಲೀಸರು

ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕಮಲಾಪೂರದಲ್ಲಿ ಮೇ 25 ರಂದು ರಾತ್ರಿ ನಡೆದಿದ್ದ ರೌಡಿಶೀಟರ್ ಮಹ್ಮದ್ ಕುಡುಚಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 36 ಗಂಟೆಗಳಲ್ಲಿ ಕೊಲೆ ಪ್ರಕರಣದ ಎಲ್ಲಾ 6 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರಕರಣದ ತನಿಖೆಗಾಗಿ ಧಾರವಾಡ ಶಹರ ಉಪವಿಭಾಗದ ಎಸಿಪಿ ವಿಜಯಕುಮಾರ, ಹುಬ್ಬಳ್ಳಿ-ಧಾರವಾಡ ಸಂಚಾರ ಉಪವಿಭಾಗ ಎಸಿಪಿ ವಿನೋದ ಮುಕ್ತದಾರ ನೇತೃತ್ವದ ತಂಡವನ್ನು ನೇಮಿಸಲಾಗಿತ್ತು.

ಈ ಕೊಲೆಗೆ ಆಸ್ತಿಗೆ ಸಂಬಂಧಿಸಿದ ವ್ಯವಹಾರವೇ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿತರನ್ನು ಧಾರವಾಡದ ಕುಖ್ಯಾತ ರೌಡಿಶೀಟರ್ ಆಗಿದ್ದ ಮೃತ ಫ್ರೂಟ್ ಇರ್ಪಾನ್ ಅಲಿಯಾಸ್ ಸೈಯದ್ ಹಂಚಿನಾಳ ಮಗನಾದ
ಅರ್ಬಾಜ್‌ (24), ಮುಂಡಗೋಡದ
ಅಲ್ಲಾವುದ್ದೀನ್ @ ರಹೀಂ ತಂದೆ ಮಹ್ಮದಜಾಫರ್ ರಜೇಬ್‌ (26)
ಅಜಯ್ @ ಅಜ್ಯಾ ತಂದೆ ಫಕ್ಕೀರಪ್ಪ ಮಣ್ಣ,(23) ಅಂದ್ @ ಅದಬೈ ತಂದೆ ನಾಸಿರ್‌ಅಹ್ಮದ ಚಟ್ಟರಕಿ, (31) ಹಾವೇರಿಯ ಅಬೀದ್ @ ಅಬೀದ್‌ಅಹ್ಮದ ತಂದೆ ಬಾಷಾಸಾಬ್ ಚಿಟ್ಟೆವಾಲೆ (27) ಧಾರವಾಡದ
ಸಾಹೀಲ್ ತಂದೆ ರಫೀಕ್ ನದಾಫ್ ಹಾಗೂ ಮುಂಡಗೋಡದ ಮೃತ ಗಣೇಶ @ ಗಣಿ ತಂದೆ ಶಂಕರ ಕಮ್ಮಾರ @ ಸಾಳುಂಕೆ, (23) ಎಂದು ಗುರುತಿಸಲಾಗಿದೆ.

ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಎ.ಸಿ.ಪಿ ಧಾರವಾಡ ಶಹರ ವಿಜಯಕುಮಾರ, ವಿನೋದ ಮುಕ್ತದಾರ, ಎಸಿಪಿ ಸಂಚಾರ ಉಪವಿಭಾಗ ಹುಬ್ಬಳ್ಳಿ-ಧಾರವಾಡ, ಧಾರವಾಡ ಉಪನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶಂಕರಗೌಡ ಬಸನಗೌಡರ್‌, ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್‌ ಸಂಗಮೇಶ ದಿಡಿಗನಾಳ ಹಾಗೂ ಸಿಬ್ಬಂದಿ ಕಾರ್ಯವೈಖರಿಯನ್ನು 
ಪೊಲೀಸ್ ಆಯುಕ್ತ ರಮಣಗುಪ್ತ
ಶ್ಲಾಘಿಸಿ 10,000 ರೂ ಬಹುಮಾನ ಘೋಷಣೆಯನ್ನು ಮಾಡಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *