ಧಾರವಾಡದ ರೌಡಿಶೀಟರ್ ಮಹ್ಮದ್ ಕುಡಚಿ ಕೊಂದ 6 ಆರೋಪಿಗಳ ಬಂಧನ
36 ಗಂಟೆಗಳಲ್ಲಿ ಮಿಂಚಿನ ಕಾರ್ಯಾಚರಣೆ
ಫ್ರೂಟ್ ಇರ್ಫಾನ್ ಮಗ. ಅರ್ಬಾಜ್ , ರಹೀಂ ಹಾಗೂ ನಾಲ್ಕು ಸಹಚರರ ಹೆಡೆಮುರಿ ಉಪನಗರ ಪೊಲೀಸರು
ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಕಮಲಾಪೂರದಲ್ಲಿ ಮೇ 25 ರಂದು ರಾತ್ರಿ ನಡೆದಿದ್ದ ರೌಡಿಶೀಟರ್ ಮಹ್ಮದ್ ಕುಡುಚಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 36 ಗಂಟೆಗಳಲ್ಲಿ ಕೊಲೆ ಪ್ರಕರಣದ ಎಲ್ಲಾ 6 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಕರಣದ ತನಿಖೆಗಾಗಿ ಧಾರವಾಡ ಶಹರ ಉಪವಿಭಾಗದ ಎಸಿಪಿ ವಿಜಯಕುಮಾರ, ಹುಬ್ಬಳ್ಳಿ-ಧಾರವಾಡ ಸಂಚಾರ ಉಪವಿಭಾಗ ಎಸಿಪಿ ವಿನೋದ ಮುಕ್ತದಾರ ನೇತೃತ್ವದ ತಂಡವನ್ನು ನೇಮಿಸಲಾಗಿತ್ತು.
ಈ ಕೊಲೆಗೆ ಆಸ್ತಿಗೆ ಸಂಬಂಧಿಸಿದ ವ್ಯವಹಾರವೇ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತರನ್ನು ಧಾರವಾಡದ ಕುಖ್ಯಾತ ರೌಡಿಶೀಟರ್ ಆಗಿದ್ದ ಮೃತ ಫ್ರೂಟ್ ಇರ್ಪಾನ್ ಅಲಿಯಾಸ್ ಸೈಯದ್ ಹಂಚಿನಾಳ ಮಗನಾದ
ಅರ್ಬಾಜ್ (24), ಮುಂಡಗೋಡದ
ಅಲ್ಲಾವುದ್ದೀನ್ @ ರಹೀಂ ತಂದೆ ಮಹ್ಮದಜಾಫರ್ ರಜೇಬ್ (26)
ಅಜಯ್ @ ಅಜ್ಯಾ ತಂದೆ ಫಕ್ಕೀರಪ್ಪ ಮಣ್ಣ,(23) ಅಂದ್ @ ಅದಬೈ ತಂದೆ ನಾಸಿರ್ಅಹ್ಮದ ಚಟ್ಟರಕಿ, (31) ಹಾವೇರಿಯ ಅಬೀದ್ @ ಅಬೀದ್ಅಹ್ಮದ ತಂದೆ ಬಾಷಾಸಾಬ್ ಚಿಟ್ಟೆವಾಲೆ (27) ಧಾರವಾಡದ
ಸಾಹೀಲ್ ತಂದೆ ರಫೀಕ್ ನದಾಫ್ ಹಾಗೂ ಮುಂಡಗೋಡದ ಮೃತ ಗಣೇಶ @ ಗಣಿ ತಂದೆ ಶಂಕರ ಕಮ್ಮಾರ @ ಸಾಳುಂಕೆ, (23) ಎಂದು ಗುರುತಿಸಲಾಗಿದೆ.
ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಎ.ಸಿ.ಪಿ ಧಾರವಾಡ ಶಹರ ವಿಜಯಕುಮಾರ, ವಿನೋದ ಮುಕ್ತದಾರ, ಎಸಿಪಿ ಸಂಚಾರ ಉಪವಿಭಾಗ ಹುಬ್ಬಳ್ಳಿ-ಧಾರವಾಡ, ಧಾರವಾಡ ಉಪನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶಂಕರಗೌಡ ಬಸನಗೌಡರ್, ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ ಹಾಗೂ ಸಿಬ್ಬಂದಿ ಕಾರ್ಯವೈಖರಿಯನ್ನು
ಪೊಲೀಸ್ ಆಯುಕ್ತ ರಮಣಗುಪ್ತ
ಶ್ಲಾಘಿಸಿ 10,000 ರೂ ಬಹುಮಾನ ಘೋಷಣೆಯನ್ನು ಮಾಡಿದ್ದಾರೆ.