ಧಾರವಾಡ prajakiran. com : ಬೈಕ್ ಮತ್ತು ಮೊಬೈಲ್ ಕಳ್ಳತನ ಮಾಡಿದ್ದ ಆರೋಪಿಯೋಬ್ಬನನ್ನು ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ತಾಲ್ಲೂಕಿನ ಬೋಗೂರ ಗ್ರಾಮದ ಧರ್ಮರಾಜ ಗಂಗಪ್ಪ ಹರಿಜನ ಎಂಬುವನೇ ಬಂಧಿತ ಆರೋಪಿ.
ಈತನಿಂದ ಕಳ್ಳತನ ಮಾಡಿದ್ದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ 2 ಬೈಕ್ ಮತ್ತು 10 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಧಾರವಾಡ ಶಹರ ಠಾಣಾ ವ್ಯಾಪ್ತಿಯ ಸಂಗಮ ವೃತ್ತ ಮತ್ತು ವಿದ್ಯಾಗಿರಿ ಠಾಣಾ ವ್ಯಾಪ್ತಿಯ ಎಸ್ ಡಿಎಂ ಕಾಲೇಜು ಬಳಿ ಬೈಕ್ ಮತ್ತು ನಗರದ ವಿವಿಧ ಕಡೆಗಳಲ್ಲಿ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದ.
ಬುಧವಾರ ಎಸ್ ಡಿಎಂ ಕಾಲೇಜು ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಈತನನ್ನು ಕರೆ ತಂದು ವಿಚಾರಣೆ ನಡೆಸಿದಾಗ ಕಳ್ಳತನದ ವಿಷಯ ಗೊತ್ತಾಗಿದೆ.
ಧಾರವಾಡ ವಿದ್ಯಾಗಿರಿ ಠಾಣೆಯ ಸಿಪಿಐ ಎಸ್.ಎಂ. ಬಾಳನಗೌಡ್ರ, ಪಿಎಸ್ ಐ ಸಚಿನಕುಮಾರ ದಾಸರಡ್ಡಿ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.