ಧಾರವಾಡ prajakiran.com : ಧಾರವಾಡದ ಮಂಜುನಾಥಪೂರದ ಸ್ವಾತಿ ಪೋಟೋ ಸ್ಟುಡಿಯೋಗೆ ಕನ್ನ ಹಾಕಿದ್ದ ಇಬ್ಬರನ್ನು ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಧಾರವಾಡದ ಲಕ್ಷ್ಮೀಸಿಂಗನಕೇರಿಯ ಸುನೀಲ ಅಲಿಯಾಸ್ ಚೋರ ಸುನ್ಯಾ ಹನುಮಂತಪ್ಪ ಶೀತಿಮನಿ ಹಾಗೂ ಮಂಜುನಾಥ ಅಲಿಯಾಸ್ ಮಾವಿನಕಾಮಿ ಮಂಜ್ಯಾ ಬಸವರಾಜ ಡಂಬರಿಕೊಪ್ಪ ಉರ್ಪ್ ಆಯಟ್ಟಿ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಕಳ್ಳತನಕ್ಕೆ ಬಳಕೆ ಮಾಡಿದ್ದ ಪಲ್ಸರ್ ಬೈಕ್, ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡ್ ವಶಕ್ಕೆ ಪಡೆಯಲಾಗಿದೆ.
ಇದೇವೇಳೆ ಅವರಿಂದ ಕ್ಯಾಮರಾ ಮತ್ತು ಲೆನ್ಸಗಳಿದ್ದ ಅಂದಾಜು 4.16 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ವಿದ್ಯಾಗಿರಿ ಪೊಲೀಸ್ ಇನ್ಸಪೆಕ್ಟರ್ ಮಹಾಂತೇಶ ಬಸಾಪೂರ ನೇತೃತ್ವದಲ್ಲಿ ಪಿಎಸ್ಐ ಸಚಿನಕುಮಾರ ದಾಸರಡ್ಡಿ, ಎಸ್.ಆರ್.ತೇಗೂರ, ಪ್ರೊ. ಪಿಎಸ್ಐ ದೇವೆಂದ್ರ ಮಾವಿನಿಂಡಿ, ಎಎಸ್ಐ ಬಿ.ಎಂ.ಅಂಗಡಿ, ಸಿಬ್ಬಂದಿಗಳಾದ ಎಂ.ಎಫ್.ನದಾಫ, ಐ.ಪಿ.ಬುರ್ಜಿ, ಆರ್.ಕೆ.ಅತ್ತಾರ, ಬಿ.ಎಂ.ಪಠಾತ್, ಎಂ.ಸಿ.ಮಂಕಣಿ, ಎಂ.ಜಿ.ಪಾಟೀಲ, ಎಂ.ವೈ.ಮಾದರ, ಡಿ.ಎಸ್.ಸಾಂಗ್ಲಿಕರ, ಎ.ಎಂ.ಹುಯಿಲಗೋಳ, ಹೆಚ್.ಕೆ.ಗೂಡುನಾಯ್ಕರ, ಹೆಚ್.ಎ.ಮಕಾಂದಾರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.