ಅಪರಾಧ

ಧಾರವಾಡದಲ್ಲಿ ತಂದೆ-ಮಗನ ಜಟಾಪಟಿ : ಮಗನ ಕೊಲೆಯಲ್ಲಿ ಅಂತ್ಯ…!

ಧಾರವಾಡ prajakiran.com : ಕುಡಿಯಲು ಹಣ ನೀಡುವಂತೆ ಪೀಡಿಸುತ್ತಿದ್ದ ತಂದೆ-ಮಗನ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಧಾರವಾಡದಲ್ಲಿ ನಡೆದಿದೆ.

ನಗರದ ಶಿಂಧೆ ಪ್ಲಾಟ್‌ನ ಕರೆಯಮ್ಮನ ಗುಡಿ ಬಳಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ.

ಶಿಂಧೆ ಪ್ಲಾಟ್‌ನ ನಿವಾಸಿ ಬಸವರಾಜ ಹಿರೇಕುಂಬಿ ಎಂಬಾತ ಪ್ರತಿದಿನ ಸರಾಯಿ ಕುಡಿಯಲು ಹಣಕ್ಕಾಗಿ ಪತ್ನಿ, ತಾಯಿ, ತಂದೆಯನ್ನ ಪೀಡಿಸುತಿದ್ದ.

ಹಣಕ್ಕಾಗಿ ತಂದೆ ಮಗನ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಮಗನ ಸಾವಿನಲ್ಲಿ ಅಂತ್ಯವಾಗಿದೆ.

ಹಣ ನೀಡದಿದ್ದರೆ ತನ್ನ ಪಾಲಿನ ಆಸ್ತಿ ಪತ್ರ ನೀಡುವಂತೆ ಪಟ್ಟು ಹಿಡಿದಿದ್ದಾನೆ.

ಈ ಸಮಯದಲ್ಲಿ ತಂದೆ ಫಕೀರಪ್ಪ ಹಿರೇಕುಂಬಿ ಮನೆಯಲ್ಲಿ ಇದ್ದ ಹಾರೇಕೋಲಿನಿಂದ ಮಗನ ಮೇಲೆ ಹಲ್ಲೆ ಮಾಡಿದ್ದಾನೆ.

ಇದರಿಂದ ತೀವ್ರ ಗಾಯಗೊಂಡ ಬಸವರಾಜನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ವೇಳೆ ಆತ ಸಾವನ್ನಪ್ಪಿದ್ದಾನೆ.

ಮಗನ ಮೇಲೆ ಹಲ್ಲೆ ಮಾಡಿ ಕೊಲೆಗೈದ ಆರೋಪಿ ತಂದೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗತಿ ಆಗಿದ್ದಾನೆ ಎಂದು ತಿಳಿದುಬಂದಿದೆ.

ಧಾರವಾಡ ಪೊಲೀಸರು ಮಾಹಿತಿ ಅರಿತು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿ  ಮಾಹಿತಿ ಕಲೆ ಹಾಕಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *