ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಜೂನ್ 7ರಿಂದ 14ರ ವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ.
ಆದರೆ ಜೂನ್ 14ರವರೆಗೆ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ 10ಗಂಟೆಯವರೆಗೆ ಆಹಾರ, ಹಾಲು, ಹಣ್ಣು, ಬೇಕರಿ,ದಿನಸಿ, ಮೀನು, ಮೊಂಸ ಹಾಗೂ ಕಿರಾಣಿ ಮಾರಾಟಕ್ಕೆ ಅನುಮತಿ ನೀಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಹೋಟೆಲ್ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಪಾರ್ಸೆಲ್ ಅವಕಾಶ ಮಾಡಿಕೊಡಲಾಗಿದೆ.
ಹೋಮ್ ಡೆಲಿವರಿ ಮಾಡುವ ಹೋಟೆಲ್ ಗಳಿಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಅವಕಾಶ ನೀಡಲಾಗಿದೆ.
ಜೊತೆಗೆ ಜೂನ್ 7ರಿಂದ 14ರ ವರೆಗೆ ಬೆಳಗ್ಗೆ 6 ಗಂಟೆಯಿಂದ 10ಗಂಟೆಯವರೆಗೆ
ಮದ್ಯ (ಪಾರ್ಸೆಲ್) ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಆದೇಶದಲ್ಲಿ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಈ ಹಿಂದೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಲು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ, ಪತ್ರಕರ್ತ ನಾಗರಾಜ ಕಿರಣಗಿ ಹಾಗೂ ಸಿದ್ದಣ್ಣ ಕಂಬಾರ ಅವರು ಮನವಿ ಸಲ್ಲಿಸಿದ್ದರು.
ಇದೀಗ ಜಿಲ್ಲಾಡಳಿತ ಲಾಕ್ ಡೌನ್ ವಿಸ್ತರಣೆ ನಡುವೆಯೂ ಅಗತ್ಯ ಸೇವೆ ಸೇರಿದಂತೆ ಆಹಾರ ಮೊಂಸ,ಬೇಕರಿ, ಹೋಟೆಲ್ ಆರಂಭಿಸಲು ಸ್ವಾಗತಿಸಿದ್ದಾರೆ.