ಧಾರವಾಡ prajakiran.com : ಅಂಗಡಿ ವಿಚಾರವಾಗಿ ಜಗಳ ವಿಕೋಪಕ್ಕೆ ತಿರುಗಿದಾಗ ಬಿಜೆಪಿ ಮುಖಂಡನೊಬ್ಬ ಪಿಸ್ತೂಲಿನಿಂದ ಗುಂಡು ಹಾರಿಸಲು ಮುಂದಾದ ಘಟನೆ ಧಾರವಾಡ ತಾಲೂಕಿನ ಹೊಸ ತೇಗೂರ ಬಳಿ ಬುಧವಾರ ನಡೆದಿದೆ.
ಅಂಗಡಿ ಇಡುವ ವಿಚಾರವಾಗಿ ಧಾರವಾಡ ಗ್ರಾಮೀಣ ಬಿಜೆಪಿ ಮಾಜಿ
ಅಧ್ಯಕ್ಷ ನಾಗಪ್ಪಾ ಗಾಣಿಗೇರ ಎಂಬುವವರೇ ಪಿಸ್ತೂಲ್ ತೆಗೆದು ಧಮಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಧಾರವಾಡ ತಾಲೂಕಿನ ಹೊಸ ತೇಗೂರ ಗ್ರಾಮದಲ್ಲಿ ನಡೆದಿರುವ ಘಟನೆ ಇದಾಗಿದೆ.
ಮಡಿವಾಳೆಪ್ಪ ಬೆಳವಲದ ಎಂಬುವವರಿಗೆ ಧಮಕಿ ಹಾಕಿದ ಬಿಜೆಪಿ ಮುಖಂಡ ನಾಗಪ್ಪ ಗಾಣಿಗೇರ ವಿರುದ್ದ ಧಾರವಾಡದ ಗರಗ ಪೊಲೀಸ್ ಠಾಣೆಗೆ ದೂರು .
ಮಡಿವಾಳೆಪ್ಪ ದೂರು ನೀಡಿದ್ದಾರೆ.
ಜೀವ ಬೆದರಿಕೆ ಹಾಕಿದ್ದಲ್ಲದೇ ಪಿಸ್ತೂಲ್ ನಿಂದ ಹೊಡೆಯಲು ಯತ್ನ
ಮಾಡಿದ ಕುರಿತು ದೂರು ದಾಖಲಿಸಿಕೊಂಡು ಪೊಲೀಸರು ನ್ಯಾಯ ನೀಡ್ತಾರಾ ಎಂಬುದನ್ನು ಕಾದು ನೋಡಬೇಕು.