ಅಂತಾರಾಷ್ಟ್ರೀಯ

ಸುಬೇದಾರ ಬಲಿ ಪಡೆದ ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆಗೆ ಹಿಡಿಶಾಪ ಹಾಕಿದ ತಾಯಿ-ಮಗ ….!

ಧಾರವಾಡ prajakiran.com : ತುಮಕೂರಿನಿಂದ ಬೆಳಗಾವಿಗೆ ತೆರಳುವ ವೇಳೆ ಧಾರವಾಡ ಬೈಪಾಸ್ ಬಳಿ ನಡೆದ ಅಪಘಾತದಲ್ಲಿ ಯೋಧ ವಸಂತ್ ರಾಜ್ ಅವರನ್ನು ಬಲಿ ಪಡೆದ ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆಗೆ ತಾಯಿ-ಮಗ ಹಿಡಿಶಾಪ ಹಾಕಿದ ಘಟನೆ ಬುಧವಾರ ನಡೆದಿದೆ.

ತನ್ನ ಪತಿ ಹಾಗೂ ತಂದೆಯ ಸಾವಿನ ಸ್ಥಳಕ್ಕೆ ಪಂಚನಾಮೆಗೆ ಆಗಮಿಸಿದ ವೇಳೆ ತಾಯಿ-ಮಗ ಇಬ್ಬರು ಕಣ್ಣೀರು ಹಾಕಿ ಬಿಕ್ಕಿ ಬಿಕ್ಕಿ ಅತ್ತ ಘಟನೆ ಸ್ಥಳೀಯರ ಕರಳು ಹಿಂಡಿದಂತಾಗಿದೆ.

ಕೆಲ ದಿನಗಳಲ್ಲಿಯೇ ಮೇಜರ್ ಹುದ್ದೆಗೆ ಬಡ್ತಿ ಪಡೆದು ಇನ್ನೇರಡು ವರ್ಷ ಸೇವೆಯಲ್ಲಿರಬೇಕಾಗಿದ್ದ ಯೋಧ ವಸಂತ್ ರಾಜ್ ಅವರನ್ನು ಈ ಬೈಪಾಸ್ ರಸ್ತೆ ಬಲಿ ಪಡೆದಿದೆ ಎಂದು ರೋಧಿಸಿದರು.

ಪತ್ನಿ ಸುರೇಖಾ ಅವರ ತವರು ಮನೆ ಬೆಳಗಾವಿಗೆ ತೆರಳುವಾಗ ಸುಬೇದಾರ ವಸಂತರಾಜ್ ಅವರನ್ನು ಈ ಹುಬ್ಬಳ್ಳಿ ಧಾರವಾಡ ಬೈಪಾಸ್ ನ ಯರಿಕೊಪ್ಪ ಕ್ರಾಸ್ ಬಳಿ ನಡೆದ ಕಾರ್ ಹಾಗೂ ಲಾರಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ತಂದೆ ಪ್ರಾಣ ಕಳೆದುಕೊಂಡ ಸ್ಥಳಕ್ಕೆ ನಮಸ್ಕರಿಸಿದ ಮಗ ಪೃಥ್ವಿರಾಜ್ ಹಾಗೂ ಅವರ ಪತ್ನಿ ಸುರೇಖಾ ದುಃಖಿಸಿದರು.

ಈವರೆಗೆ ನೂರಾರು ಜನರ ಪ್ರಾಣ ಬಲಿ ಪಡೆದಿರುವ ಬೈಪಾಸ್ ರಸ್ತೆ ಅಗಲೀಕರಣ ಕನಸಿನ ಮಾತಾಗಿ ಉಳಿದಿದೆ.

ತಮ್ಮ ನೆಚ್ಚಿನ ತಂದೆ- ತಾಯಿ, ಗಂಡ, ಹೆಂಡತಿ, ಮಕ್ಜಳನ್ನು ಕಳೆದುಕೊಂಡ
ಅನೇಕ ಕುಟುಂಬದ ಸದಸ್ಯರು
ಅನಾಥ ಪ್ರಜ್ಞೆಯಿಂದ ಇಂದಿಗೂ ಕಣ್ಣೀರು ಹಾಕಿದರೂ
ಕಣ್ಣುಮುಚ್ಚಿ ಕುಳಿತ ಜಿಲ್ಲಾಡಳಿತದ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈಗಲಾದರೂ ಜಾಣಕುರುಡು ಬಿಟ್ಟು ಜಿಲ್ಲಾಡಳಿತ ಬೈಪಾಸ್ ಅಪಘಾತಕ್ಕೆ ಕಡಿವಾಣ ಹಾಕಲು ಪ್ರಾಮಾಣಿಕವಾಗಿ ಸ್ಪಂದಿಸವುದೇ ಕಾದು ನೋಡಬೇಕಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *