ಧಾರವಾಡ Prajakiran.com : ಕುಟುಂಬ ಕಲಹ ಹಿನ್ನೆಲೆಯಲ್ಲಿ ಚಿಕ್ಕಪ್ಪ ತನ್ನ ಅಣ್ಣನ ಮಗನನೇ ಕೊಲೆ ಮಾಡಿದ ಘಟನೆ ಧಾರವಾಡ ಮುರುಘಾಮಠದ ಡಿಪೋ ಸರ್ಕಲ್ ಬಳಿ ಇರುವ ಮನೆಯಲ್ಲಿ ನಡೆದೀದೆ.
ಧಾರವಾಡದ ಮುರುಘಮಠದ ಆಕಾಶ್ ಕೋಟುರು ಎಂಬ ಯುವಕನೇ 30 ಹತ್ಯೆಯಾದ ದುರ್ದೈವಿಯಾಗಿದ್ದಾನೆ. ಮನೆಯಲ್ಲೆಯೇ ನಡೆದ ಹತ್ಯೆ ಇದಾಗಿದ್ದು ಮಾರಕಾಸ್ತ್ರಗಳಿಂದ ತನ್ನ ಅಣ್ಣನ ಮಗನ ಮೇಲೆ ಪ್ರಕಾಶ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಆಕಾಶ ಕುಡಿದು ಗಲಾಟೆ ಮಾಡಿದ್ದ ಈ ಹಿನ್ನೆಲೆಯಲ್ಲಿ ಸಿಟ್ಟಿನಿಂದ ಅವನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದು. ಈ ಕುರಿತು ಧಾರವಾಡ ಉಪನಗರ ಪೋಲಿಸ್ ಠಾಣೆ ಪೋಲಿಸರು ತನಿಖೆ ಮುಂದುವರೆಸಿದ್ದಾರೆ. ಕೊಲೆ ಮಾಡಿದ ಆರೋಪಿ ಪ್ರಕಾಶ್ ಪರಾರಿಯಾಗಿದ್ದು ಕೊಲೆಗೆ ಅಸಲಿ ಕಾರಣ ಏನು ಎಂಬುದು ಪೋಲಿಸರ ತನಿಖೆಯಿಂದ ತಿಳಿದು ಬರಬೇಕಿದೆ.