ಯಶಸ್ವಿ ಶಸ್ತ್ರ ಚಿಕಿತ್ಸೆಯಿಂದ ಹಸು ಪ್ರಾಣಾಪಾಯದಿಂದ ಪಾರು
ಧಾರವಾಡ : ಧಾರವಾಡ ತಾಲೂಕಿನ ಹಾರೋಬೆಳವಡಿಯ ರೈತ ರಾಮಪ್ಪ ಉದಮೇಶಿ ಅವರ ಹಸು ಪ್ಲಾಸ್ಟಿಕ್ ಅಜೀರ್ಣ ತೆಯಿಂದ ಬಳಲುತ್ತಿತ್ತು.
ಪಶುವೈದ್ಯರಾದ ಡಾ: ವಿನೀತ, ಡಾ: ತಿಪ್ಪಣ್ಣ ರಾಂಪೂರೆ ಹಾಗೂ ಡಾ: ಕಿರಣಕುಮಾರ ಇವರ ತಂಡ ಶಸ್ತ್ರ ಚಿಕಿತ್ಸೆ ಮಾಡಿ 45 ಕೆ.ಜಿ ತೂಕದ ಪ್ಲಾಸ್ಟಿಕ್ ತೆಗೆದು ಹಸುವಿನ ಪ್ರಾಣ ಉಳಿಸಿದ್ದಾರೆ.
ಪ್ಲಾಸ್ಟಿಕ್ ವಸ್ತುಗಳನ್ನು ಹಸುಗಳು ತಿನ್ನದಂತೆ ನೋಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಾಧ್ಯವಾದಷ್ಟು ಅದರ ಬಳಕೆ ಮಾಡುವುದನ್ನು ನಿಲ್ಲಿಸಿ ಹಾಗೂ ಹೊರಗಡೆ ಬಿಸಾಡಬೇಡಿ ಎಂದು
ಡಾ: ತಿಪ್ಪಣ್ಣ ರಾಂಪುರೆ ಅವರು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.
ಇದರಿಂದ ಪರಿಸರ ಮಾಲಿನ್ಯವಲ್ಲದೇ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವದೆಂದರು.
ಪಶುವೈದ್ಯರ ತಂಡಕ್ಕೆ ಊರಿನ ಗ್ರಾಮಸ್ಥರು ಅಭಿನಂದಿಸಿದ್ದಾರೆ.