follow/like: facebook.com/prajakirannews
ಉಡುಪಿ prajakiran.com : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಶಾಲೆ-ಕಾಲೇಜುಗಳನ್ನು ತರಾತುರಿಯಲ್ಲಿ ಆರಂಭಿಸುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶಕುಮಾರ್ ಸ್ಪಷ್ಟಪಡಿಸಿದ್ದಾರೆ.
ಅವರು ಮಂಗಳವಾರ ನಗರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಪೂರ್ವಸಿದ್ದತೆಗಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಹೀಗಾಗಿ ಖಾಸಗಿ ಶಾಲೆ-ಕಾಲೇಜುಗಳು ರಾಜ್ಯ ಸರಕಾರದ ಆದೇಶ ಮೀರಿ ಅಡ್ಮಿಷನ್ ಮಾಡಿಕೊಂಡರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆಲ ಖಾಸಗಿ ಶಾಲೆ-ಕಾಲೇಜುಗಳು ಪಾಲಕರಿಗೆ ಪ್ರವೇಶ ಶುಲ್ಕ ಭರಿಸುವಂತೆ ನೋಟಿಸ್ ಕಳುಹಿಸುವುದು, ಎಸ್ ಎಂ ಎಸ್ ಸಂದೇಶ ರವಾನಿಸುವುದು ಹಾಗೂ ಪೋನ್ ಮುಖಾಂತರ ಒತ್ತಡ ಹೇರುವುದು ಕೇಳಿಬರುತ್ತಿದೆ.
ಅಲ್ಲದೆ, ಪ್ರವೇಶ ಮಾಡಿಕೊಳ್ಳುವಂತೆ ಒತ್ತಡ ಹೇರುವುದು ತರವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸದ್ಯಕ್ಕೆ ಖಾಸಗಿ ಶಾಲೆ-ಕಾಲೇಜುಗಳು ಆರಂಭಿಸುವಂತಿಲ್ಲ. ಮಕ್ಕಳಿಂದ ಸಿಬ್ಬಂದಿಗೆ ಇಲ್ಲವೇ ಸಿಬ್ಬಂದಿಯಿಂದ ಮಕ್ಕಳಿಗೆ ಹರಡುವ ಭೀತಿಯಿದೆ ಎಂದರು.