ರಾಜ್ಯ

ಬಿ.ಎಲ್ ಸಂತೋಷ ನಮ್ಮ ರಾಷ್ಟ್ರೀಯ ನೇತಾರರು ಎಂದ ಸಿ.ಟಿ. ರವಿ

ಬೆಂಗಳೂರು prajakiran.com : ಬಿ.ಎಲ್ ಸಂತೋಷ ಅವರು ನಮ್ಮ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸಮರ್ಥನೆ ಮಾಡಿಕೊಂಡಿದ್ದಾರೆ.

ಅವರು ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯ ಸಭೆಯ ಎರಡು ಸ್ಥಾನಗಳಿಗೆ ಬಿಜೆಪಿ ಹೈಕಮಾಂಡ್ ತನ್ನ ಹೆಸರನ್ನು ಪ್ರಕಟಿಸಿದೆ. ರಾಜ್ಯ ಬಿಜೆಪಿ ಕೋರ್ ಕಮಿಟಿ ಸೂಚಿಸಿದ ಹೆಸರೇ ಬೇರೆ ಹೈಕಮಾಂಡ್ ಪ್ರಕಟಿಸಿದ ಹೆಸರೇ ಬೇರೆ. ಇದನ್ನು ಎಲ್ಲರು ಒಪ್ಪಿಕೊಳ್ಳಲೇಬೇಕು ಎಂದು ಗುಟುರು ಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯಅಧ್ಯಕ್ಷ  ಜೆ.ಪಿ. ನೆಡ್ಡಾ ಅವರ ತರಹನೇ ಬಿ.ಎಲ್ ಸಂತೋಷ ಕೂಡ ನಮ್ಮ ಪಕ್ಷದ ರಾಷ್ಟ್ರೀಯನೇತಾರರು ಎಂದು ಹೇಳಿದರು.



ಎಲ್ಲರೂ ಅವರ ನಾಯಕತ್ವವನ್ನು ಒಪ್ಪಿಕೊಳ್ಳಲೇಬೇಕು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಒಪ್ಪಿಕೊಂಡಿಲ್ಲ ಎಂದು ಎಲ್ಲಾದರೂ ಹೇಳಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ನಮ್ಮದು ಕೇಡರ್ ಬೇಸಡ್ ಪಾರ್ಟಿ, ಬಿ.ಎಸ್. ಯಡಿಯೂರಪ್ಪ ಅವರನ್ನು ನಾವು ಆಯ್ಕೆ ಮಾಡಿದ್ದೇವು. ಅವರ ನಾಯಕತ್ವದಲ್ಲಿ ಜನರು ತೀರ್ಪು ಕೊಟ್ಟಿದ್ದಾರೆ. ಮೂಗು ಇರುವತನ ನೆಗಡಿ ಬರುತ್ತದೆ. ಹಾಗಂತ ನೆಗಡಿ ಬಂದಿದೆ ಎಂದು ಮೂಗು ಕೊಯ್ದುಕೊಳ್ಳಲು ಸಾಧ್ಯನಾ ಎಂದರು.

ರಾಜಕೀಯದಲ್ಲಿ ಲಾಭೀ ಇದ್ದದೆ.  ವರಿಷ್ಟರು ತೀರ್ಮಾನಿಸಿದ್ದಾರೆ. ಸಿಎಂ  ಯಡಿಯೂರಪ್ಪ ಸೇರಿ ಎಲ್ಲರೂ ಒಪ್ಪಿಕೊಳ್ಳಬೇಕು.

ರಾಷ್ಟ್ರೀಯ ನಾಯಕರು ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಹೆಸರು ಅಂತಿಮಗೊಳಿಸಿದ್ದಾರೆ. ಹೈಕಮಾಂಡ್ ಲಿಸ್ಟ್ ಗೂ ರಾಜ್ಯ ಬಿಜೆಪಿ ಲಿಸ್ಟ್ ಗೂ ತಾಳಮೇಳ ಇಲ್ಲ. ಇದರಲ್ಲಿ ಬಿ.ಎಲ್ ಸಂತೋಷ ಅವರು ಕೈ ಮೇಲಾಗಿದೆ ಎಂದರು.

ಯಡಿಯೂರಪ್ಪ ಸಿಎಂ ಆಗುವುದರಲ್ಲಿಯೂ ಸಂತೋಷಅವರ ಪಾತ್ರವಿದೆ. ಅದೇ ರೀತಿ ರಾಜ್ಯ ಸಭೆಗೆ ಎರಡು ಸ್ಥಾನ ಆಯ್ಕೆಯಾಗುವುದಕ್ಕೂ ಕಾರಣ ಎಂದು ಹೇಳುವ ಮೂಲಕ ಸಿ.ಟಿ. ರವಿ ಅಚ್ಚರಿ ಮೂಡಿಸಿದ್ದಾರೆ.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *