ಧಾರವಾಡ prajakiran.com : ಧಾರವಾಡದ ನರೇಂದ್ರ ಗ್ರಾಮದಲ್ಲಿ ಪ್ರಿಯಕರನ ಜೊತೆಗೆ ಸೇರಿ ಗಂಡನ ಕೊಲ್ಲಿಸಿದ್ದ ಹೆಂಡತಿ ಹಾಗೂ ಆಕೆಯ ಗೆಳೆಯ ಸೇರಿ ಮೂವರನ್ನು ಅರೆಸ್ಟ್ ಮಾಡುವಲ್ಲಿ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಮೂರು ದಿನಗಳ ಹಿಂದೆಯಷ್ಟೇ ತನ್ನ ಮಗ ಕಾಣೆಯಾಗಿದ್ದಾನೆ ಎಂದು ಆತನ ತಾಯಿ ರೋಷನ್ಬೀ ನೀಡಿದ ದೂರಿನ ಆಧಾರದ ಮೇಲೆ ಸೊಸೆ ಫರವೀನಭಾನು ವನ್ನು ಕರೆದು ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.
ನರೇಂದ್ರ ಗ್ರಾಮದ ಪೀರಸಾಬ ನದಾಫ ಎಂಬಾತನನ್ನು ಆತನ ಪತ್ನಿ ಫರವೀನಬಾನು ಹಾಗೂ ಸೋಮಯ್ಯ ಈರಯ್ಯ ಪೂಜಾರ ಹಾಗೂ ಆತನ ಗೆಳೆಯನನ್ನು ಬಂಧಿಸಿರುವುದಾಗಿ ಪ್ರಜಾಕಿರಣ.ಕಾಮ್ ಗೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸೈ ಮಹೇಂದ್ರಕುಮಾರ ನಾಯಕ ತಿಳಿಸಿದ್ದಾರೆ.
ಹುಬ್ಬಳ್ಳಿ ಬಳಿಯಿರುವ ನದಿಯಲ್ಲಿ ಪೀರಸಾಬನ ಶವವನ್ನು ಎಸೆದು ಬಂದಿದ್ದರು. ಅಲ್ಲದೆ, ಏನೂ ಆಗೇ ಇಲ್ಲವೆಂಬಂತೆ ಆರಾಮವಾಗಿ ಮನೆಯಲ್ಲಿ ಕೂತವರಿಗೆ ಪಿಎಸೈ ಟ್ರೀಟ್ ಮೆಂಟ್ ಸತ್ಯವನ್ನ ಹೇಳಿಸುವಂತೆ ಮಾಡಿದೆ.
ಇದೀಗ ಈ ಕೊಲೆಗೆ ಪೀರಸಾಬನ ಹೆಂಡತಿ ಫರವೀನಭಾನು ಮತ್ತು ಇನ್ನೋಬ್ಬ ಸೋಮಯ್ಯ ಪೂಜಾರ್ ಸಾಥ್ ನೀಡಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಆ ಮೂಲಕ ಗಂಡ ಪೀರಸಾಬನನ್ನ ಕೊಲೆ ಮಾಡಿಸಿದ ಪತ್ನಿ ಫರವೀನ್ ಬಾನು ಹಾಗೂ ಆಕೆಯ ಪ್ರಿಯಕರ ಸೋಮಯ್ಯ ಪೂಜಾರ ಕಂಬಿ ಎಣಿಸುವಂತಾಗಿದೆ. |
ಒಟ್ಟಾರೆ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಹೆಂಡತಿಯೇ ಗಂಡನನ್ನು ಕೊಲ್ಲಿಸಿ, ಇದೀಗ ಜೈಲು ಪಾಲಾಗಿರುವುದು ಮಾತ್ರ ದುರಂತದ ಸಂಗತಿ.