ಅಪರಾಧ

ಹುಬ್ಬಳ್ಳಿ ಪೊಲೀಸರಿಂದ ಭೂಗತ ಪಾತಕಿ ಬಚ್ಚಾಖಾನ್ ತೀವ್ರ ವಿಚಾರಣೆ

ರೌಡಿಶೀಟರ್ ಫ್ರೂಟ್ ಇರ್ಫಾನ್ ಶೂಟೌಟ್ ಪ್ರಕರಣದ ತನಿಖೆ ಮತ್ತಷ್ಟು ಚುರುಕು ಹುಬ್ಬಳ್ಳಿ prajakiran.com : ಧಾರವಾಡದ ನಟೋರಿಯಸ್ ರೌಡಿಶೀಟರ್ ಫ್ರೂಟ್ ಇರ್ಫಾನ್ ಶೂಟೌಟ್ ಪ್ರಕರಣದ ತನಿಖೆಯನ್ನು ಹುಬ್ಬಳ್ಳಿ ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಕರೆತಂದು ವಿಚಾರಣೆ ನಡೆಸಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್ ಮಾರ್ಗದರ್ಶನದಲ್ಲಿ ಡಿಸಿಪಿ ಪಿ. ಕೃಷ್ಣಕಾಂತ, ಹಳೆ ಹುಬ್ಬಳ್ಳಿ ಪೊಲೀಸ ಇನ್ಸಪೆಕ್ಟರ್ ಶಿವಾನಂದ ಕಮತಗಿ,  ಕೊಲೆಯ ಸೂತ್ರದಾರಿ ಎನ್ನಲಾದ ಭೂಗತ ಲೋಕದ ಪಾತಕಿ ಸೈಯದ್ ಸುಲೇಮಾನ್ ಬಚ್ಚಾಖಾನ್ ನನ್ನ […]

ಅಪರಾಧ

ಸಹೋದರಿ ಜೊತೆ ಅನುಚಿತವಾಗಿ ವರ್ತಿಸಬೇಡಿ ಅಂದವನಿಗೆ ಚಾಕು ಇರಿದು ಕೊಲೆ

ಗದಗ prajakiran.com : ತನ್ನ ಸಹೋದರಿ ಜೊತೆಗೆ ಎಲ್ಲಂದರಲ್ಲಿ ಮಾತನಾಡುವುದು, ಭೇಟಿ ಮಾಡಿ ಅನುಚಿತವಾಗಿ ವರ್ತಿಸಬೇಡಿ ಅಂದಿದ್ದಕ್ಕೆ ಸಹೋದರರಿಬ್ಬರು ಆ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ೨೩ ವರ್ಷದ ಮುಸ್ತಾಕ್ ಅಲಿ ನದಾಫ್ ಎಂಬ ಯುವಕನ‌ ಕೊಲೆಯಾದ ದುರ್ದೈವಿಯಾಗಿದ್ದಾನೆ. ಇತನಿಗೆ ದಾವಲ್ ಸಾಬ್  ಮಲ್ಲಾಡದ ಹಾಗೂ ಮಹ್ಮದ್ ಅಲಿ ಮಲ್ಲಾಡದ ಎಂಬ ಸಹೋದರರು ಒಟ್ಟಾಗಿ […]

ಅಪರಾಧ

ಧಾರವಾಡದಲ್ಲಿ ಗಂಡನ ಕೊಲ್ಲಿಸಿದ್ದ ಹೆಂಡತಿ, ಗೆಳೆಯ ಸೇರಿ ಮೂವರ ಅರೆಸ್ಟ್

ಧಾರವಾಡ prajakiran.com : ಧಾರವಾಡದ ನರೇಂದ್ರ ಗ್ರಾಮದಲ್ಲಿ ಪ್ರಿಯಕರನ ಜೊತೆಗೆ ಸೇರಿ ಗಂಡನ ಕೊಲ್ಲಿಸಿದ್ದ ಹೆಂಡತಿ ಹಾಗೂ ಆಕೆಯ ಗೆಳೆಯ ಸೇರಿ ಮೂವರನ್ನು ಅರೆಸ್ಟ್  ಮಾಡುವಲ್ಲಿ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ತನ್ನ ಮಗ ಕಾಣೆಯಾಗಿದ್ದಾನೆ ಎಂದು ಆತನ ತಾಯಿ ರೋಷನ್‌ಬೀ ನೀಡಿದ ದೂರಿನ ಆಧಾರದ ಮೇಲೆ  ಸೊಸೆ ಫರವೀನಭಾನು ವನ್ನು ಕರೆದು ಪೊಲೀಸರು ವಿಚಾರಣೆ ನಡೆಸಿದಾಗ   ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ನರೇಂದ್ರ ಗ್ರಾಮದ ಪೀರಸಾಬ ನದಾಫ ಎಂಬಾತನನ್ನು […]

ಅಪರಾಧ

ಚನ್ನರಾಯಪಟ್ಟಣದಲ್ಲಿ ವೃದ್ದ ದಂಪತಿಯ ಬರ್ಬರ ಹತ್ಯೆ

ಹಾಸನ prajakiran.com : ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ವೃದ್ದ ದಂಪತಿಯ ಬರ್ಬರ ಹತ್ಯೆ ನಡೆದಿದ್ದು, ಜಿಲ್ಲೆಯ ಜನತೆ ಮತ್ತೆ ಬೆಚ್ಚಿಬಿದ್ದಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ಆಲಗೊಂಡನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮೃತ ವೃದ್ದ ದಂಪತಿಯನ್ನು ಮುರುಳೀಧರ್ , ಉಮಾದೇವಿ ಎಂದು ಗುರುತಿಸಲಾಗಿದೆ. ಇಬ್ಬರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ವೃದ್ದ ದಂಪತಿಗಳಿಗೆ‌ ಮಕ್ಕಳು ಇರಲಿಲ್ಲ. 80 ಎಕರೆ ಜಮೀನು ಹೊಂದಿದ್ದ ಮುರುಳೀಧರ್ ಹಾಗೂ ಉಮಾದೇವಿ ದಂಪತಿ ಇಬ್ಬರು ತೋಟದ ಮನೆಯಲ್ಲಿ ವಾಸವಿದ್ದರು. ಮುರುಳೀಧರ್ […]

ಅಪರಾಧ

ಪತ್ನಿ ಕೊಲೆ ಮಾಡಿದ ಪಾಪಿ ಪತಿ ಅಂದರ್ …!

ಹುಬ್ಬಳ್ಳಿ prajakiran.com : ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ತನ್ನ ಪತ್ನಿಯನ್ನು ಪತಿಯೇ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಹೊರವಲಯದಲ್ಲಿ ಶನಿವಾರ ನಡೆದಿದೆ. ದೇವರಗುಡಿಹಾಳ ಗ್ರಾಮದ ವಿದ್ಯಾ ಕೇಶಪ್ಪನವರ ಕೊಲೆಯಾದ ಮಹಿಳೆಯಾಗಿದ್ದಾಳೆ. ಔಷಧಿ ಕೊಡಿಸುವುದಾಗಿ ಹೇಳಿ ಗ್ರಾಮದ ಹೊರವಲಯಕ್ಕೆ ಕರೆದುಕೊಂಡು ಹೋಗಿದ್ದ ಪತಿ ನಿಂಗಪ್ಪ ಕೇಶಪ್ಪನವರ, ಪತ್ನಿ ವಿದ್ಯಾಳನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ಸಂಬಂಧ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ […]

ಅಪರಾಧ

ಫ್ರೂಟ್ ಇರ್ಫಾನ್ ಕೊಲೆ : ಐವರು ಆರೋಪಿಗಳ ಬಂಧನ

ಹುಬ್ಬಳ್ಳಿ prajakiran.com :  ಹುಬ್ಬಳ್ಳಿ-ಧಾರವಾಡ ಅವಳಿ ನಗರ ಹಾಗೂ ಧಾರವಾಡ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದ್ದ ರೌಡಿಶೀಟರ್ ಫ್ರೂಟ್ ಇರ್ಫಾನ್ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಹುಬ್ಭಳ್ಳಿ-ಧಾರವಾಡ ಮಹಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣ ಭೇದಿಸಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ ಅವರು ಡಿಸಿಪಿ ಆರ್. ಬಿ. ಬಸರಗಿ ಅವರ ನೇತೃತ್ವದಲ್ಲಿ ಎಸಿಪಿ ಎಂ.ವಿ. ಮಲ್ಲಾಪುರ ಅವರ ಮಾರ್ಗದರ್ಶನದಲ್ಲಿ ಆರು ಅಧಿಕಾರಿಗಳ ತಂಡವನ್ನು ರಚಿಸಿದ್ದರು. ಹಳೆ ಹುಬ್ಬಳ್ಳಿ ಇನ್ಸಪೆಕ್ಟರ್ ಮಾರುತಿ ಗುಳ್ಳಾರಿ, ಪೊಲೀಸ್ ಇನ್ಸಪೆಕ್ಟರ್ ಗಳಾದ ಅಲ್ತಾಫ್ ಮುಲ್ಲಾ, […]