ಧಾರವಾಡ prajakiran.com : ಮನೆಗೆ ಹಾಕಿದ್ದ ಕೀಲಿಯನ್ನು ಮುರಿದು ಮನೆಗಳ್ಳತನ ಮಾಡಿದ್ದ ಖದೀಮನನ್ನು ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಧಾರವಾಡದ ಜೋಶಿ ಗಲ್ಲಿ ನಿವಾಸಿ ಪ್ರಕಾಶ ತಂದೆ ರಾಮು ಇಂಗಳೆ ಅವರು ಸೆ. 7ರಂದು ಮನೆ ಮಂದಿಯೆಲ್ಲಾ ಕೀಲಿಹಾಕಿಕೊಂಡು ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪಗೆ ಹೋಗಿದ್ದರು.
ಈ ವೇಳೆ ಮನೆ ಕೀಲಿ ಮುರಿದು ಒಳನುಗ್ಗಿದ್ದ ಖದೀಮ ಮನೆಯಲ್ಲಿದ್ದ ಬೆಳ್ಳಿ, ಬಂಗಾರ ಹಾಗೂ ನಗದು ದೋಚಿಕೊಂಡು ಹೋಗಿದ್ದ.
ಆರೋಪಿ ಲಕ್ಷ್ಮಿಸಿಂಗನಕೇರಿಯ ಮಂಜುನಾಥ ಅರ್ಜುನ ಹುಲ್ಲೂರು (20) ಇತನನ್ನು ಬಂಧಿಸಿ ಆತನ ಬಳಿ ಹದಿನೈದು ಗ್ರಾಮ ಬಂಗಾರ, 270 ಗ್ರಾಂ ಬೆಳ್ಳಿ ಅಂದಾಜು ಮೌಲ್ಯದ 66 ಸಾವಿರ ವಶಪಡಿಸಿಕೊಂಡು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ ಆಯುಕ್ತ ಆರ್. ದಿಲೀಪ, ಡಿಸಿಪಿಗಳಾದ ಪಿ. ಕೃಷ್ಣಕಾಂತ, ಆರ್. ಬಿ. ಬಸರಗಿ, ಎಸಿಪಿ ಜಿ ಅನುಷಾ, ವಿದ್ಯಾಗಿರಿ ಪೊಲೀಸ್ ಇನ್ಸಪೆಕ್ಟರ್ ಮಹಾಂತೇಶ ಬಸಾಪುರ, ಧಾರವಾಡ ಶಹರ ಪೊಲೀಸ್ ಠಾಣೆ ಪಿ ಎಸ್ ಐ ಎಲ್ ಕೆ ಕೊಡಬಾಳ, ಎಎಸ್ ಐ ಮಹೇಶ ಕುರ್ತಕೋಟಿ, ಪಿ.ಬಿ. ಕಾಳೆ, ಪೊಲೀಸರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.