ರಾಜ್ಯ

ಧಾರವಾಡ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಮಲ್ಲಮ್ಮ ಎರಡನೇ ದಿನವೂ ಸಿಬಿಐ ವಿಚಾರಣೆ

ಧಾರವಾಡ prajakiran.com : ಧಾರವಾಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕರಿಗಾರ ಹಾಗೂ ಯೋಗೀಶಗೌಡ ಪತ್ನಿ ಮಲ್ಲಮ್ಮ ವಿಚಾರಣೆಯನ್ನು ಸತತ ಎರಡನೇ ದಿನವೂ ಸಿಬಿಐ ಅಧಿಕಾರಿಗಳ ತಂಡ ನಡೆಸಿ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದೆ.

ಗುರುವಾರವಷ್ಟೇ ದಿನವೀಡಿ ವಿಚಾರಣೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಶುಕ್ರವಾರವೂ ಅವರಿಬ್ಬರನ್ನು ಮೊದಲು ಪ್ರತ್ಯೇಕ ಹಾಗೂ ಆನಂತರ ಒಟ್ಟಿಗೆ ವಿಚಾರಣೆ ನಡೆಸಿದರು.

ಮೃತ ಯೋಗೀಶಗೌಡ ಪತ್ನಿ ಮಲ್ಲಮ್ಮ ಹಾಗೂ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರಿಗೆ ಇವತ್ತು ಕೂಡ ಸಿಬಿಐ ಅಧಿಕಾರಿಗಳು ಕೆಲಹೊತ್ತು ವಿಚಾರಣೆ ನಡೆಸಿ ಬರೋಬ್ಬರಿ ಡ್ರಿಲ್ ಮಾಡಿದ್ದಾರೆ.

ನಿನ್ನೆ ಇಡೀ ದಿನ ಡ್ರಿಲ್ ಮಾಡಿದ್ದ ಅಧಿಕಾರಿಗಳು ಸತತ ಎರಡನೇ ದಿನವೂ ವಿಚಾರಣೆ ನಡೆಸಿರುವುದು ತೀವ್ರ ನಡುಕ ಹುಟ್ಟಿಸಿದೆ.

ಈ ಬಗ್ಗೆ ಹೊರಬಂದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ನಿನ್ನೆ ಉಳಿದಿದ್ದ ಬಾಕಿ ವಿಚಾರಣೆ ಮುಂದುವರೆಸಿದರು.

ರಾಜಿ ಸಂಧಾನ ನಡೆದಿದ್ದು ಸತ್ಯ. ಈ ಸಭೆಯಲ್ಲಿ ಮಾಜಿ  ಸಚಿವರು ಭಾಗವಹಿಸಿದ್ದರು. ಮುಂದೆ ಏನೆಲ್ಲಾ ನಡೆಯಿತು ಎಂದು ಹೇಳಿದ್ದೇನೆ . ಮೊದಲು ಪ್ರತ್ಯೇಕ ಹಾಗೂ ಆನಂತರ ಮಲ್ಲಮ್ಮ ಜೊತೆಗೆ ವಿಚಾರಣೆ ನಡೆಸಿದರು ಎಂದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕರಿಗಾರ ಸರಕಾರ ನೀಡಿರುವ ವಾಹನದಲ್ಲಿಯೇ ಆಗಮಿಸಿ ವಿಚಾರಣೆ ಎದುರಿಸಿದ್ದರು.

ನಿನ್ನೇ ಕೂಡ ಅದೇ ವಾಹನದಲ್ಲಿಯೇ ಧಾರವಾಡದ ಉಪನಗರ ಪೊಲೀಸ್ ಠಾಣೆಗೆ ಆಗಮಿಸಿದ್ದರು.

 ಶಿವಾನಂದ ಕರಿಗಾರ ಹಾಗೂ  ಮಲ್ಲಮ್ಮಅವರನ್ನು ಸತತ ಎರಡನೇ ದಿನವೂವಿಚಾರಣೆಗೆ ಒಳಪಡಿಸಿರುವುದು ಧಾರವಾಡ ಜಿಲ್ಲೆಯ ರಾಜಕಾರಣದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ.  

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *