ಧಾರವಾಡ prajakiran.com : ರಾತ್ರಿಯಿಡೀ ಮಳೆ ಸುರಿದ ಹಿನ್ನೆಲೆ ಯಲ್ಲಿ ಧಾರವಾಡದ ಹಾಸ್ಮಿನಗರ ರಸ್ತೆ ಹಳ್ಳದಂತಾಗಿದೆ.
ಇದರಿಂದಾಗಿ ಸ್ಥಳೀಯ ನಿವಾಸಿಗಳು ಮನೆಯಿಂದ ಹೊರಹೋಗಲು ಪರದಾಟ ನಡೆಸುವಂತಾಗಿದೆ.
ಹದಗೆಟ್ಟ ರಸ್ತೆ ಗುಂಡಿಗಳಲ್ಲಿ ತುಂಬಿ ನಿಂತಿರುವ ನೀರುಹಾಸ್ಮೀ ನಗರ 1ನೇ ಕ್ರಾಸ್ನಲ್ಲಿ ಈ ಯಡವಟ್ಟು ಆಗಿದೆ.
ತುಂಬಿರುವ ನೀರುಬಕೇಟ್ಗಳಿಂದ ಹೊರ ಹಾಕುತ್ತಿರುವ ನಿವಾಸಿಗಳು ಜನಪ್ರತಿನಿಧಿಗಳ ವಿರುದ್ದಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ನೀರು ಹೊರ ಹಾಕಿ ದಾರಿ ಸುಗಮ ಮಾಡಿಕೊಳ್ಳುತ್ತಿರುವ ಸ್ಥಳೀಯರು ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ನೋಡುವಂತೆ ಆಗ್ರಹಿಸಿದ್ದಾರೆ.
ಇದೇ ವೇಳೆ ಅನೇಕರು ತಗ್ಗು ಗುಂಡಿಗಳಲ್ಲಿ ಬಿದ್ದು ಗಾಯಗೊಂಡ ಪರಿಣಾಮ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.