ಜಿಲ್ಲೆ

ಧಾರವಾಡ ಜಿಲ್ಲಾಸ್ಪತ್ರೆ ಎದುರು ಜಯ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ

ಧಾರವಾಡ prajakiran.com : ಜಿಲ್ಲ‍ಾ ಸರಕಾರಿ ಆಸ್ಪತ್ರೆಯು ಜಿಲ್ಲೆಯ ಅನೇಕ ಬಡ ಜನರಿಗೆ ಜೀವನಾಡಿಯಾಗಿದ್ದು, ಈ ಆಸ್ಪತ್ರೆಗೆ ಪ್ರತಿ ದಿನ ಅನೇಕ ಸಾವಿರಾರು ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ.

ಆದರೆ ಆಸ್ಪತ್ರೆಯಲ್ಲಿ ಕೇವಲ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಲಭ್ಯವಿದ್ದು, ತುರ್ತು ಚಿಕಿತ್ಸೆ ಮತ್ತು ಇನ್ನಿತರ ದೊಡ್ಡ ರೋಗಗಳಿಗೆ ಸೂಕ್ತ ರೀತಿ ಸೌಲಭ್ಯಗಳೇ ಇಲ್ಲದಂತಾಗಿದೆ.

ಐಸಿಯು, ವಿವಿಧ ರೀತಿಯ ಸ್ಕ್ಯಾನಿಂಗ್ ಸೌಲಭ್ಯದ ಕೊರತೆ ಕಂಡುಬರುತ್ತದೆ. ಅಲ್ಲದೆ ಇಲ್ಲಿರುವ ವೈದ್ಯಾಧಿಕಾರಿಗಳು ಬಡ ಜನರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ನಮ್ಮಲ್ಲಿ ಸೂಕ್ತ ರೀತಿಯ ಸೌಲಭ್ಯವಿಲ್ಲ ಎಂದು ಹೇಳಿ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ಹೋಗಲು ಶಿಫಾರಸ್ಸು ಮಾಡುತ್ತಿರುವುದು ಸರಿಯಲ್ಲ.

ಇದರಿಂದ ಬಡ ರೋಗಿಯ ಜನರಿಗೆ ಇಲ್ಲಿಂದ ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಆರೋಪಿಸಿದೆ‌.

 ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಧಾರವಾಡ ಜಿಲ್ಲೆಯ ಬಡ ಜನರಿಗೆ ಸೂಕ್ತ ರೀತಿಯ ತುರ್ತು ಚಿಕಿತ್ಸೆ ಸೌಲಭ್ಯವನ್ನು ಒದಗಿಸಿಕೊಡುವ ಮೂಲಕ ಬಡ ಜನರಿಗೆ ನ್ಯಾಯ ದೊರಕಿಸಿಕೊಡಬೇಕೆಂದು, ಮುಖ್ಯಮಂತ್ರಿಗೆ  ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು.

 ಧಾರವಾಡ ಜಿಲ್ಲಾ ಸರಕಾರಿ ಆಸ್ಪತ್ರೆಯ  ಮುಖ್ಯ ವೈದ್ಯಾಧಿಕಾರಿಗಳಿಗೂ ಕೂಡ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ್ ಜಾಧವ್, ಸುರೇಶ ಮಾಡರಗಿ, ಕಮುಲು ಫೂಲ್ವಾಲೆ , ಈರಣ್ಣ ಪಾಟೀಲ,ನಾಗರಾಜ ರಾಯಣ್ಣವರ್, ವಿವೇಕ್ ಕಡೆಮನಿ, ನಿತಿನ ಪಾಟೀಲ, ರಮೇಶ್ ಪಾಟೀಲ್ , ಪ್ರವೀಣ್ ದೇಸಾಯಿ, ಮಲ್ಲಿಕಾರ್ಜುನ್ ಅಸುಂಡಿ, ಅಕ್ಷಯ್ ರಾಯಣ್ಣವರ್ , ನಿತಿನ್ ಪಾಟೀಲ್  ಜ್ಯೋತಿಬಾ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *