ಧಾರವಾಡ prajakiran.com : ನಾಡಿನ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಸಿಎಂ ಬಿ ಎಸ್ ವೈ ಅವರು ರೈತರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ರೈತರ ಬೆಳೆಸಾಲ ಮನ್ನಾ ಮಾಡಬೇಕು ಎಂದು ಶಿವಸೇನೆ ಪಕ್ಷದ ರಾಜ್ಯ ಅಧ್ಯಕ್ಷ ಕುಮಾರ ಹಕಾರಿ ಒತ್ತಾಯಿಸಿದ್ದಾರೆ.
ಪ್ರವಾಹದಿಂದ ರಾಜ್ಯದ ನೊಂದ ರೈತರಿಗೆ ಪ್ರತಿ ಹೆಕ್ಟೇರ್ ಗೆ 35 ಸಾವಿರ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಬೇಕು.
ಈ ಭಾಗದ ಜ್ವಲಂತ ಸಮಸ್ಯೆ ಮಲಪ್ರಭಾ ನದಿಗಳ ಪಕ್ಕದಲ್ಲಿ ಇರುವಂತಹ ಗ್ರಾಮಗಳ ಸ್ಥಳಾಂತರ ಕಾರ್ಯ ಮಾಡಬೇಕು. ಜೊತೆಗೆ ಮಲಪ್ರಭಾ ನದಿಯ ಹೂಳು ಎತ್ತುವ ಕಾರ್ಯ ಅತೀ ಜರೂರ ಆಗಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
ಮಲಪ್ರಭಾ ನದಿಯ ಹೂಳೆತ್ತುವ ಮತ್ತು ಒತ್ತುವರಿ ತೆರವುಗೊಳಿಸುವ ಕಾರ್ಯ ಆಗಬೇಕೆಂದು ಶಿವಸೇನಾ ವತಿಯಿಂದ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ತಂದರೂ ಯಾರೂ ಸ್ಪಂದಿಸಿಲ್ಲ
ಅಧಿಕಾರಿಗಳು ಸರಕಾರದ ಗಮನಕ್ಕೆ ತಂದು ಮಲಪ್ರಭಾ ನದಿಯ ಹೂಳು ಎತ್ತುವ ಕಾರ್ಯ ಕೈಗೊಂಡಿದ್ದರೆ ಮಲಪ್ರಭಾ ನದಿಯು ಶಾಂತವಾಗಿ ಸುಗಮವಾಗಿ ಹರಿಯುತ್ತಿತ್ತು ಎಂದು ವೈಜ್ಞಾನಿಕ ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ