ರಾಜ್ಯ

ಗಣೇಶ, ಮೊಹರಂ ಹಬ್ಬ ಒಟ್ಟಿಗೆ ಆಚರಿಸುವ ಹಿಂದು ಕುಟುಂಬ

ಧಾರವಾಡ prajakiran.com : ಹಿಂದುಗಳ ಹಬ್ಬ ಗಣೇಶ ಚತುರ್ಥಿ ಹಾಗೂ ಮುಸ್ಲಿಂರ ಹಬ್ಬ ಮೊಹರಂ ಅನ್ನು ಎರಡು ಒಟ್ಟಿಗೆ ಆಚರಿಸುವ ಹಿಂದು ಕುಟುಂಬವೊಂದು ಧಾರವಾಡದಲ್ಲಿ ಇದೆ.

ಹೌದು ಅಚ್ಚರಿಯ ಸಂಗತಿಯಾದರೂ ನಂಬಲೇಬೇಕಾದ ಸತ್ಯ. ಧಾರವಾಡದ ಬೂಸಪ್ಪ ಚೌಕದಲ್ಲಿರುವ ಮೇದಾರ ಓಣಿಯಲ್ಲಿರುವ ಮಹಾದೇವಪ್ಪ  ಮುಧೋಳ ಹಾಗೂ ನೀಲವ್ವಮುಧೋಳ ದಂಪತಿ ಮನೆಯಲ್ಲಿ  ದಾವಲ್ ಮಲ್ಲಿಕ್ ಪಂಜಾ ಹಾಗೂ  ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

ಎರಡು ಏಕಕಾಲಕ್ಕೆ ಪೂಜೆಗೊಳ್ಳುತ್ತವೆ. ಮುಧೋಳ ಕುಟುಂಬದಿಂದ ಸುಮಾರು ನಲವತ್ತು ವರ್ಷದಿಂದ ಬಂದಂತಹ ಸಂಪ್ರದಾಯವನ್ನು ಅವರ ಮಕ್ಕಳಾದ ಸುಧೀರ ಮುಧೋಳ ಹಾಗೂ ಸಹೋದರರು ಮುನ್ನಡೆಸಿಕೊಂಡು ಹೊರಟಿದ್ದಾರೆ.

ಮೊದಲ ಬಾರಿ ನೀಲವ್ವ ಹಾಗೂ ಮಹಾದೇವಪ್ಪ ಮುಧೋಳ ದಂಪತಿಗಳ ಅನುಪಸ್ಥಿತಿ ಮಕ್ಕಳಿಗೆ ಕಾಡುತ್ತಿದೆ.

ಅವರ ಸವಿ ನೆನಪಿನಲ್ಲಿಯೇ ಅವರಿಂದ ಶುರುವಾದ ಆಚರಣೆಯನ್ನು ಇವರಿಬ್ಬರ ಸ್ವರ್ಗ ವಾಸದ ನಂತರವೂ ಮುಂದುವರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಸುಧೀರ್ ಗೆ ಅವರ ಸಹೋದರರಾದ ವಿಜಯ, ಪ್ರಕಾಶ್  ಹಾಗೂ ಗಣೇಶ ಮುಧೋಳ  ಸಾಥ್ ನೀಡಿದ್ದಾರೆ.

 ಕೋಮು ಸೌಹಾರ್ದತೆ ಸಾರುವ ಇಂತಹ ಆಚರಣೆಗಳ ಸಂಖ್ಯೆ ಹೆಚ್ಚಲಿ. ಈ ಸತ್ ಸಂಪ್ರದಾಯ ಹೀಗೆ ಮುಂದುವರೆಯಲಿ ಎಂಬುದು ನಮ್ಮ ಆಶಯ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *