ಬಾಗಲಕೋಟೆ prajakiran.com : ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿ ಹಾಗೂ ಹಾನಿ ಕುರಿತು ಸೆ. 12ರ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭೇಟಿಯಾಗಿ ಮಾತುಕತೆ ನಡೆಸಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಅವರು ಮಂಗಳವಾರ ಆಲಮಟ್ಟಿಯಲ್ಲಿ ಲಾಲ್ ಬಹದ್ದೂರ ಶಾಸ್ತ್ರೀ ಜಲಾಶಯಕ್ಕೆ ಬಾಗಿನಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ವೇಳೆ ಕೇಂದ್ರ ನೀರಾವರಿ ಸಚಿವರನ್ನು ಕೂಡ ಭೇಟಿ ಮಾಡಲಾಗುವುದು. ಆಲಮಟ್ಟಿ ಯೋಜನೆಗೆ ನೆರವು ಕೋರಲಾಗುವುದು ಎಂದರು.
ಸದ್ಯಕ್ಕೆ ರಾಜ್ಯದ ಹಣಕಾಸು ಸ್ಥಿತಿ ಗತಿ ಚೆನ್ನಾಗಿಲ್ಲ. ಹೀಗಾಗಿ ಕೇಂದ್ರದ ನೆರವು ಕೇಳ್ತಿವಿ. ಇಲ್ಲದಿದ್ದರೆ ಸಾಲಮಾಡಿಯಾದರೂ ಅಭಿವೃದ್ದಿ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಿಎಂಗೆ ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದಆರ್ ಅಶೋಕ, ರಮೇಶ ಜಾರಕಿಹೊಳಿ ಸೇರಿ ಅನೇಕರು ಸಾಥ್ ನೀಡಿದರು.
ಕಳೆದ ವರ್ಷದ ಭೀಕರ ಪ್ರವಾಹದಿಂದ ನದಿ ತೀರದ ಗ್ರಾಮಗಳು ಮುಳುಗಡೆ ಆದಾಗ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಿಎಂ @BSYBJP ಅವರು ಗ್ರಾಮಗಳ ಸ್ಥಳಾಂತರದ ಭರವಸೆ ನೀಡಿದ್ದರು.
ಅದರೆ ಇದುವರೆಗೂ ಆ ಕೆಲಸ ಆರಂಭವೇ ಆಗಿಲ್ಲ. ಈಗ ಮತ್ತೆ ನೆರೆ ಬಂದಿದೆ. ಮುಖ್ಯಮಂತ್ರಿಗಳ ಈ ಭಾರಿಯ ನೆರೆ ವೀಕ್ಷಣೆಯೂ ಕೇವಲ ನೆಪ ಮಾತ್ರಕ್ಕೆ ಎಂಬಂತಾಗದಿರಲಿ ಎಂದು ಕಾಂಗ್ರೆಸ್ ಕುಟುಕಿದೆ.