ಬಳ್ಳಾರಿ prajakiran.com : ಮಹಾನಗರ ಪಾಲಿಕೆ ಚುನಾವಣೆ ಎಣಿಕೆ ಕಾರ್ಯ ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂದು ನಡೆದಿದೆ.
ಪಾಲಿಕೆಯ ಒಟ್ಟು 39 ವಾರ್ಡ್ಗಳಲ್ಲಿ 13 ವಾರ್ಡ್ಗಳಲ್ಲಿ ಬಿಜೆಪಿ, 21 ವಾರ್ಡ್ಗಳಲ್ಲಿ ಕಾಂಗ್ರೆಸ್ ಹಾಗೂ 5 ಪಕ್ಷೇತರರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಈ ಮೂಲಕ ಮಹಾನಗರ ಪಾಲಿಕೆ ಕಾಂಗ್ರೆಸ್ ‘ಕೈ’ ವಶವಾಗಿದೆ.
ಆ ಮೂಲಕ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಹಿಡಿತ ಸಾಧಿಸಿದ್ದ ರೆಡ್ಡಿ ಸಹೋದರರು, ಸಚಿವರಾದ ಬಿ. ಶ್ರೀರಾಮುಲು, ಆನಂದ ಸಿಂಗ್ ಅವರಿಗೆ ತೀವ್ರ ಸ್ವರೂಪದ ಹಿನ್ನಡೆಯಾದಂತಾಗಿದೆ.
ಮೊದಲು ಕಾಂಗ್ರೆಸ್ ಪಕ್ಷದ ಭದ್ರಬುನಾದಿಯಾಗಿದ್ದ ಬಳ್ಳಾರಿಯಲ್ಲಿ ಮತ್ತೆ ದಿವಾಕರ ಬಾಬು, ಸೂರ್ಯನಾರಾಯಣ ರಡ್ಡಿ, ಕೆ.ಸಿ. ಕೊಂಡಯ್ಯ, ಅಲ್ಲಂವೀರಭ್ರದಪ್ಪ ಸೇರಿದಂತೆ ಘಟಾನುಘಟಿ ಕಾಂಗ್ರೆಸ್ ನಾಯಕರ ಕೈ ಬಲಗೊಂಡಂತಾಗಿದೆ.