ತೀವ್ರ ಆಕ್ರೋಶ
ಧಾರವಾಡ prajakiran. com : ಹುಬ್ಬಳ್ಳಿ – ಧಾರವಾಡ ಮಹಾನಗರ ನೀರು ಸರಬರಾಜು ನಿರ್ವಹಣೆಗೆಂದು ಕರ್ನಾಟಕ ಜಲಮಂಡಳಿಯವರಿಂದ ಕಳೆದ 20 ವರ್ಷಗಳಿಂದಲೂ ಆಗಾಗ್ಗೆ ಅವಶ್ಯಕತೆಗನಗುಣವಾಗಿ ನೇಮಕಗೊಂಡು ಸಾಕಷ್ಟು ನುರಿತ ಸಿಬ್ಬಂದಿಯನ್ನು ವರ್ಕ ಸಮೇತ ಹಸ್ತಾಂರಿಸಿಕೊಳ್ಳದೇ ಸುಮಾರು 600 ರಷ್ಟು ಜನರನ್ನು ಸಾಮೂಹಿಕವಾಗಿ ವಜಾ ಮಾಡಿದೆ.
ಅಲ್ಲದೆ, ಆ ಜಾಗಕ್ಕೆ ಹೊಸಬರನ್ನು ನೇಮಕಗೊಳಿಸಿಕೊಂಡು ಕೆಲಸ ನಿರ್ವಹಿಸುವ ಮೂಲಕ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ , ಖಾಸಗಿ ಗುತ್ತಿಗೆದಾರ ಮೇ . ಎಲ್ ಆಂಡ್ ಟಿ ರವರಿಗೆ ಶ್ರೀ ಸ್ಯಾಂಡ್ ನೀಡಿರುವುದನ್ನು ಪ್ರತಿಭಟಿಸಿ ನೌಕರರಿಂದ ಏ. 26 ರಿಂದ ಅನಿರ್ಧಿಷ್ಟ ಅವಧಿಯ ಸಾಮೂಹಿಕ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಧಾರವಾಡ ಮಹಾನಗರ ಸಭೆಯ ನೀರು ಸರಬರಾಜು ವಿಭಾಗದ ದಿನಗೂಲಿ , ಗುತ್ತಿಗೆ ಹಾಗೂ ಹಂಗಾಮಿ ನೌಕರರ ಸಂಘ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ವೆಂಕಟೇಶ್ ಹಳಕಟ್ಟಿ, ಇದನ್ನು ಕೈ ಬಿಟ್ಟು ಮಹಾನಗರ ಪಾಲಿಕೆ, ಜಲಮಂಡಳಿ ಹಾಗೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಬಸವರಾಜ ದೇಸಾಯಿ, ಸಂತೋಷ ಹಿರೆಮಠ,ಸುನಿಲ್ ಭೂಮಣ್ಣವರ,ಮಹಾಂತೇಶ ಗೌಡರ್, ಶಿವು ಹಿರೆಮಠ,ಎಮ್ ಆರ್ ಪಾಟೀಲ್, ಗಣೇಶ ಸವಣೂರ ಉಪಸ್ಥಿತರಿದ್ದರು.