ಧಾರವಾಡ prajakiran.com : ಹಿಂದುಗಳ ಹಬ್ಬ ಗಣೇಶ ಚತುರ್ಥಿ ಹಾಗೂ ಮುಸ್ಲಿಂರ ಹಬ್ಬ ಮೊಹರಂ ಅನ್ನು ಎರಡು ಒಟ್ಟಿಗೆ ಆಚರಿಸುವ ಹಿಂದು ಕುಟುಂಬವೊಂದು ಧಾರವಾಡದಲ್ಲಿ ಇದೆ. ಹೌದು ಅಚ್ಚರಿಯ ಸಂಗತಿಯಾದರೂ ನಂಬಲೇಬೇಕಾದ ಸತ್ಯ. ಧಾರವಾಡದ ಬೂಸಪ್ಪ ಚೌಕದಲ್ಲಿರುವ ಮೇದಾರ ಓಣಿಯಲ್ಲಿರುವ ಮಹಾದೇವಪ್ಪ ಮುಧೋಳ ಹಾಗೂ ನೀಲವ್ವಮುಧೋಳ ದಂಪತಿ ಮನೆಯಲ್ಲಿ ದಾವಲ್ ಮಲ್ಲಿಕ್ ಪಂಜಾ ಹಾಗೂ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಎರಡು ಏಕಕಾಲಕ್ಕೆ ಪೂಜೆಗೊಳ್ಳುತ್ತವೆ. ಮುಧೋಳ ಕುಟುಂಬದಿಂದ ಸುಮಾರು ನಲವತ್ತು ವರ್ಷದಿಂದ ಬಂದಂತಹ ಸಂಪ್ರದಾಯವನ್ನು ಅವರ ಮಕ್ಕಳಾದ […]