ಶಿಕ್ಷಕ ಶ್ಯಾಮ್ ಮಲ್ಲನಗೌಡರ ಪುತ್ರ ಸಾಯಿಕಿರಣ್ ಇನ್ನಿಲ್ಲ
ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡ ಜಿಲ್ಲೆಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘಟನೆಯ ಮುಖಂಡ ಹಾಗೂ ಸೇಂಟ್ ಜೋಸೆಫ್ ಶಾಲೆ ಶಿಕ್ಷಕರು ಆಗಿರುವ ಶ್ಯಾಮ್ ಮಲ್ಲನ ಗೌಡರ ಪುತ್ರ ಸಾಯಿಕಿರಣ (ಆದರ್ಶ) ಶ್ಯಾಮ್ ಮಲ್ಲನಗೌಡರ (23) ವಿಧಿವಶರಾದರು.
ಅವರು ನಿನ್ನೆ ಶುಕ್ರವಾರ ರಾತ್ರಿ ಮೈಸೂರಿನಲ್ಲಿ ಅಪಘಾತದಲ್ಲಿ ಇಹಲೋಕವನ್ನು ತ್ಯಜಿಸಿದರು.
ಇವರು ಮೈಸೂರಿನ ಎಲ್ ಆಂಡ್ ಟಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಸಾಯಿ ಕಿರಣ್ ತಂದೆ ಶ್ಯಾಮ್ ಮಲ್ಲನಗೌಡರ ತಾಯಿ ಮತ್ತು ಒಬ್ಬ ತಮ್ಮ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ನಾಳೆ ಭಾನುವಾರ ಬೆಳಿಗ್ಗೆ 8 ಗಂಟೆಗೆ ಧಾರವಾಡದ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ನಡೆಯಲಿದೆ.