ಧಾರವಾಡ prajakiran.com : ಧಾರವಾಡ ಜಿಲ್ಲೆಯಾದ್ಯಂತ ಹಳ್ಳಿ ಹಳ್ಳಿಗೂ ಮಹಾಮಾರಿ ಕರೋನಾ ವ್ಯಾಪಸುತ್ತಿರುವುದರಿಂದ ಧಾರವಾಡ ದಲಾಲ್ ವ್ಯಾಪಾರಸ್ಥರ ಸಂಘವು ಸ್ವಯಂ ಪ್ರೇರಿತವಾಗಿನಿರ್ಬಂಧ ಹೇರಲು ನಿರ್ಧರಿಸಿದೆ ಎಂದು ಸಂಘದಅಧ್ಯಕ್ಷ ಶಿವಶಂಕರ ಹಂಪಣ್ಣವರ ತಿಳಿಸಿದ್ದಾರೆ.
ಜು. 13 ರಿಂದ ಜು. 31ರವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 5 ಗಂಟೆಗೆ ಖರೀದಿ ಹಾಗೂ ಮಾರಾಟದ ವ್ಯಾಪಾರ ವಹಿವಾಟು ನಡೆಸಲಾಗುವುದು.
ಹೀಗಾಗಿ ಧಾರವಾಡ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ರೈತರು ಮಧ್ಯಾಹ್ನ 3 ಗಂಟೆಗೆ ಒಳಗೆ ಧಾರವಾಡ ಎಪಿಎಂಸಿಗೆ ಆವರಣಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಈಗಾಗಲೇ ಧಾರವಾಡ ಎಪಿಎಂಸಿಗೆ ಕೂಡ ಮಾಹಿತಿ ನಿಡಲಾಗಿದೆ ಎಂದು ಧಾರವಾಡ ದಲಾಲ್ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶಿವಶಂಕರ ಹಂಪಣ್ಣವರ ತಿಳಿಸಿದ್ದಾರೆ.
ಕರೋನಾ ನಿಯಂತ್ರಣಕ್ಕೆ ಎಲ್ಲಾ ವ್ಯಾಪಾರಸ್ಥರು ಹಾಗೂ ರೈತರು ಸಹಕರಿಸಬೇಕು. ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೇಸರ್ ಬಳಸುವುದು ಹಾಗೂ ವ್ಯಾಪಾರವಹಿವಾಟು ಮಾಡಲು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.