ಜಿಲ್ಲೆ

ಧಾರವಾಡದ ಆರ್ ಎಲ್ ಎಸ್ ಕಾಲೇಜ್ ಅಧ್ಯಕ್ಷರಾಗಿ ಶಿವಶಂಕರ ಹಂಪಣ್ಣವರ ನೇಮಕ

ಧಾರವಾಡ prajakiran.com : ನಾಡಿನ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳ ಪೈಕಿ ಒಂದಾಗಿರುವ ಬೆಳಗಾವಿಯ ಕೆ ಎಲ್ ಇ ಸಂಸ್ಥೆಯ ಅಂಗ ಸಂಸ್ಥೆಗಳ ಪೈಕಿ ಒಂದಾಗಿರುವ ಧಾರವಾಡದ ಆರ್ ಎಲ್ ಎಸ್ ಕಾಲೇಜು ವಿಭಾಗದ ಅಧ್ಯಕ್ಷರಾಗಿ ಶಿವಶಂಕರ್ ಹಂಪಣ್ಣವರ ಅವರನ್ನು ನೇಮಿಸಿ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಕೊರೆ ಅವರು ಆದೇಶ ಹೊರಡಿಸಿದ್ದಾರೆ.

ಆರ್ ಎಲ್ ಎಸ್ ಅಧ್ಯಕ್ಷರಾಗಿ ನೇಮಕಗೊಂಡ ಶಿವಶಂಕರ್ ಹಂಪಣ್ಣವರ ಅವರ ನಿವಾಸಕ್ಕೆ ಕಾಲೇಜು ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಆಗಮಿಸಿ ಹಂಪಣ್ಣವರ ಅವರನ್ನು ಸ್ವಾಗತಿಸಿ, ಶುಭ ಕೋರಿ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಶಿವಶಂಕರ್ ಹಂಪಣ್ಣವರ, ಕೊರೆಯವರು ಹಾಗೂ
ಶಂಕ್ರಣ್ಣ ಮುನವಳ್ಳಿಯವರು,
ನನ್ನ ಸಾಮಾಜಿಕ ಕಾಳಜಿ ಹಾಗೂ
ಬದ್ದತೆಯ ಮೇಲೆ ವಿಶ್ವಾಸವಿಟ್ಟು ಆರ್ ಎಲ್ ಎಸ್ ಕಾಲೇಜು ಚೇರ್ ಮೆನ್ ಆಗಿ ನೇಮಿಸಿದ್ದಕ್ಕೆ ಕೆ.ಎಲ್ ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಕೊರೆ ಹಾಗೂ ಸಂಸ್ಥೆಯ ನಿರ್ದೇಶಕರಾದ ಶಂಕ್ರಣ್ಣ ಮುನವಳ್ಳಿ ಅವರಿಗೆ ಧನ್ಯವಾದ ಹೇಳಿದರು. ‌

ಕಳೆದ ಹತ್ತು ವರ್ಷಗಳ ಕಾಲ ಸಂಸ್ಥೆಯ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವದ ಆಧಾರದ ಮೇಲೆ ಬರುವ ದಿನಗಳಲ್ಲಿ ಶಂಕ್ರಣ್ಣ ಮುನವಳ್ಳಿ ಮಾರ್ಗದರ್ಶನದ ಮೇಲೆ
ಆರ್ ಎಲ್ ಎಸ್ ಕಾಲೇಜನ್ನು ಇನ್ನಷ್ಟು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು‌.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *