28 ಆನೆಗಳ ಕರೋನಾ ವರದಿ ನೆಗೆಟಿವ್….!
ಬಿಳಿಗಿರಿ ಶ್ರೀನಿವಾಸ
ಚಾಮರಾಜನಗರ prajakiran.com :
ತಮಿಳುನಾಡಿನ ಮಧುಮಲೆ ಅರಣ್ಯದ 28 ಅನೆಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಯಿತು.
ಚಾಮರಾಜನಗರದಿಂದ ಊಟಿಗೆ ಹೋಗುವ ದಾರಿಯಲಿ ಸಿಗುವ ಮಧುಮಲೆ ಅರಣ್ಯದಲ್ಲಿ ಅರಣ್ಯ ಸಚಿವರ ಆದೇಶದಂತೆ ಅರಣ್ಯ ಇಲಾಖೆಯ ಪಶು ವೈದ್ಯರಾದ ರಾಜೇಶ್ ಕುಮಾರ್ ಅವರು 28 ಅನೆಗಳಿಗೆ ಕೋವಿಡ್ ಪರಿಕ್ಷೇ ನಡೆಸಿದ್ದರು.
ಈ ವೇಳೆ ಮಾತನಾಡಿದ ವೈದ್ಯರಾದ ರಾಜೇಶ್ ಕುಮಾರ್, ಸರ್ಕಾರದ ಅದೇಶದಂತೆ ಮಧುಮಲೆ ಅರಣ್ಯ ಶಿಬಿರದಲ್ಲಿ ಇರುವ ಅನೆಗಳಿಗೆ ಕೊರೊನಾ ತಪಾಸಣೆಯನ್ನು ಮಾಡಲಾಗಿದೆ. ಕೋವಿಡ್ ವರದಿ ಬಂದಿದ್ದು ಎಲ್ಲಾ ಅನೆಗಳ ವೈದ್ಯಕಿಯ ವರದಿ ನೆಗಿಟಿವ್ ಬಂದಿದೆ.
ನಮ್ಮ ದೇಶದಲ್ಲಿ ಅನೆಗಳಿಗೆ ಮೊದಲ ಬಾರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದರು.
ಈ ಅನೆ ಶಿಬಿರವು ಉತ್ತಮ ಮಟ್ಟದಲ್ಲಿ ನಿರ್ವಹಣೆ ಮಾಡಲಾಗಿದೆ. ಶಿಬಿರದ ಅನೆಗಳಿಗೆ ಪ್ರತಿ ದಿನ 16 ಕೆಜಿ ಆಹಾರವನ್ನು ನೀಡಲಾಗುತ್ತಿದೆ. ಹಾಗೂ ಪ್ರತಿ ತಿಂಗಳು ವೈದ್ಯಕೀಯ ತಪಾಸಣೆ ನಡೆಸಲಾಗಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಸಂದರರಾಜು ಇದ್ದರು