ಬೆಂಗಳೂರು prajakiran.com : ರಾಷ್ಟ್ರೀಯ ಕಾಮಧೇನು ಆಯೋಗದ ಉಪಕ್ರಮವಾಗಿ ದೇಸಿ ಹಸುಗಳ ಸಗಣಿ ಬಳಸಿ ‘ಗೋಮಯ ಗಣೇಶ’ನನ್ನು ತಯಾರಿಸಲಾಗಿದೆ.
ಈ ಗಣೇಶನ ವೈಶಿಷ್ಟತೆಯೆಂದರೆ ಚತುರ್ಥಿ ಪೂಜೆಯ ನಂತರ ಗಿಡಗಳಿಗೆ ಗೊಬ್ಬರವಾಗಿಯೂ ವಿಸರ್ಜಿಸಬಹುದಾದ ಈ ಪರಿಸರ-ಸ್ನೇಹಿ ವಿಗ್ರಹ, ಸಂಪ್ರದಾಯಕ್ಕೆ ಅನುಗುಣವಾಗಿದ್ದು, ರೈತರ ಆದಾಯವನ್ನೂ ಹೆಚ್ಚಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಜಾಗೃತಿ ಟ್ರಸ್ಟ್ ಗೋಮಯ ಗಣೇಶ ವಿತರಣೆ ನಡೆಸುತ್ತಿದೆ ಎಂದು ಅವರು ವಿವರಿಸಿದ್ದಾರೆ. ಕೋವಿಡ್ 19 ಸಂದರ್ಭದಲ್ಲಿ ಮಾರುಕಟ್ಟೆಗೆ ಬಂದ ಈ ಗಣೇಶ ವಿಶಿಷ್ಟವಾಗಿದೆ ಎಂದರೆ ತಪ್ಪಾಗಲಾರದು.