ಹಲವು ನೌಕರಿ ಅಲೆದಾಟಕ್ಕೆ ಬ್ರೇಕ್
ಕೇಂದ್ರ ಸರಕಾರದ ಮಹತ್ವದ ನಿರ್ಧಾರ
ನವದೆಹಲಿ prajakiran.com : ದೇಶದ್ಯಾಂತ ಇನ್ನೂ ಮುಂದೆ ಕೇವಲ ಒಂದೇ ಒಂದು ಸಾಮಾನ್ಯಅರ್ಹತಾ ಪರೀಕ್ಷೆ ಮೂಲಕ ನೌಕರಿಗೆ ಆಯ್ಕೆಯಾಗಬಹುದು.
ಇದರಿಂದಾಗಿ ಹಲವು ನೌಕರಿಗೆ ಅಲೆದಾಟಕ್ಕೆ ಬ್ರೇಕ್ ಬೀಳಲಿದ್ದು, ಅಂತಹ ಮಹತ್ವದ ನಿರ್ಧಾರ ಕೇಂದ್ರ ಸರಕಾರದ ಸಚಿವ ಸಂಪುಟ ಬುಧವಾರ ತೆಗೆದುಕೊಂಡಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವೇಡಕರ ಪ್ರಕಟಿಸಿದರು.
ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಇದರಿಂದ ದೇಶದಲ್ಲಿ ಪ್ರತಿ ವರ್ಷ ನಡೆಯುವ ಹತ್ತು ಹಲವು ನೌಕರಿಗೆ ಅಭ್ಯರ್ಥಿಗಳ ಅಲೆದಾಟ, ಸಮಯ, ಪರಿಶ್ರಮ ವ್ಯರ್ಥ ಹಾಗೂ ವಿಶೇಷವಾಗಿ ಹಣದ ಉಳಿತಾಯವೂ ಕೂಡ ಆಗಲಿದೆ ಎಂದು ವಿವರಿಸಿದರು.
ಎಲ್ಲವೂ ಒಂದೇ ಒಂದು ಪರೀಕ್ಷೆ ಮೂಲಕ ಸುಲಭ ಸಾಧ್ಯವಾಗಲಿದೆ. ಕೇಂದ್ರ ಸರಕಾರದ ಉದ್ಯೋಗಳಿಗೆ ಕಂಪ್ಯೂಟರ್ ಆಧಾರಿತ ಸಾಮಾನ್ಯಅರ್ಹತಾ ಪರೀಕ್ಷೆಯನ್ನು ನಡೆಸುವ ಸಲುವಾಗಿಯೇ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್ ಆರ್ ಎ) ಸ್ಥಾಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ಈ ಐತಿಹಾಸಿಕ ನಿರ್ಧಾರದಿಂದ ಪ್ರತಿವರ್ಷ 2.5 ಕೋಟಿ ಯುವಕರಿಗೆ ಅನುಕೂಲವಾಗಲಿದ್ದು, ಇದು ಕೋಟ್ಯಾಂತರ ಯುವಜನರ ಬಹುವರ್ಷಗಳ ಆಶಯವಾಗಿತ್ತು. ಅಂತಹ ಬೇಡಿಕೆಗೆ ಸ್ಪಂದಿಸಿದಂತಾಗಿದೆಎಂದು ತಿಳಿಸಿದ್ದಾರೆ.