ಧಾರವಾಡ prajakiran.com : ಧಾರವಾಡದ ಜೀವನಾಡಿ ಕೆಲಗೇರಿ ಕೆರೆ ತುಂಬಿ ಹರಿಯುತ್ತಿದ್ದು,ಅದರ ಕೋಡಿ ಬಿದ್ದಿದೆ.
ಅದರ ಅಂಗವಾಗಿ ಕೆಲಗೇರಿ ನಿವಾಸಿಗಳು, ಕೆಲಗೇರಿ ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್, ಕೆಲಗೇರಿ ಹಿತರಕ್ಷಣಾ ಸಮಿತಿ, ಶ್ರೀ ಆಶೀರ್ವಾದ ಗಣಪತಿ ದೇವಸ್ಥಾನ ಟ್ರಸ್ಟ್ ವತಿಯಿಂದ ಬುಧವಾರ ಕೆರೆಗೆ ಬಾಗಿನ ಸಲ್ಲಿಸಲಾಯಿತು.
ಇದೇ ವೇಳೆ ಹಿರಿಯರಾದ ಸಿ.ಎಸ್. ಪಾಟೀಲ್, ನಾರಾಯಣ ಕದಂ, ನಾಗೇಶ್ ತಲವಾಯಿ, ಬಸಯ್ಯ ಹಿರೇಮಠ, ಗ್ರೀನ್ ಆರ್ಮಿಯ ಪ್ರಕಾಶ ಗೌಡರ ಅವರಿಗೆ ಸನ್ಮಾನಿಸಲಾಯಿತು.
ಇದಕ್ಕೆ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರೆಡ್ಡಿ, ಧಾರವಾಡ ವಾಲ್ಮಿ ಸಂಸ್ಥೆ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ, ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ರುದ್ರಗೌಡ ಪಾಟೀಲ, ಊರಿನ ಹಿರಿಯರಾದಾದ ಶಿವನಪ್ಪ ಸಾದರ, ಮಾಜಿ ಪಾಲಿಕೆ ಸದಸ್ಯರಾದ ವಿಜಯಲಕ್ಷ್ಮಿ ಕಲೂತಿಮಠ, ಕರಬಸಯ್ಯ ಕಡ್ಲಿ, ಶಾಂತಯ್ಯ ಹಿರೇಮಠ, ಕೊಟ್ರಯ್ಯ ಬಾಗೋಡಿ, ನಿಂಗಯ್ಯ ಕಲ್ಯಾಣಮಠ, ಎ.ಪಿ.ಎಂ.ಸಿ ಸದಸ್ಯರಾದ ರಮೇಶ ತಲಗೇರಿ, ಬಸವರಾಜ ಗರಗ, ಗಾಯತ್ರಿ ಶೆಟ್ಟಿ, ಅನ್ನಪೂರ್ಣ ಸಾದರ, ಶೇಖಪ್ಪ ಕಡ್ಲಿ ಸಾಕ್ಷಿಯಾದರು.