ಧಾರವಾಡ prajakiran.com : ಕರೋನಾ ಭೀತಿಯಿಂದ ಎಲ್ಲರೂ ತತ್ತರಿಸಿಹೋಗಿದ್ದಾರೆ. ಇದಕ್ಕೆ ಕೇಂದ್ರ ಸಚಿವರು ಹೊರತಾಗಿಲ್ಲ.
ಯಾರಾದರೂ ಮಾಸ್ಕ್ ಧರಿಸದೆ ಬಂದರೆ ಇಲ್ಲವೇ ಮನವಿ ಕೊಡಲು ಬಂದರೆ ಆ ಮನವಿ ಪತ್ರಕ್ಕೆ ಕೇಂದ್ರ ಸಚಿವರು ಸ್ಯಾನಟೈಸರ್ ಸಿಂಪಡಿಸಿ ಮನವಿ ಪತ್ರ ಸ್ವೀಕರಿಸುತ್ತಿದ್ದಾರೆ.
ಹೌದು ಇದು ಅಚ್ಚರಿಯಾದ್ರೂ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಾಸ್ಕ್ ಧರಿಸದೆ ಸಭೆಗೆ ಆಗಮಿಸಿದ ಅಧಿಕಾರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಿಸಿ ತಾಕಿಸಿದರು.
ಹಲವು ತಿಂಗಳ ಬಳಿಕ ದೆಹಲಿಯಿಂದ ಧಾರವಾಡಕ್ಕೆ ಬಂದಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಂಗಳವಾರ ಕರೋನಾ ವಿಷಯಕ್ಕೆ ಸಂಬಂಧಿಸಿದ ವಿಚಾರಕ್ಕೆಜಿಲ್ಲೆಯ ಎಲ್ಲಾ ಹಿರಿಯ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯ ಸಭಾಭವನದಲ್ಲಿ ಕರೆದಿದ್ದರು.
ಸಭೆ ಆರಂಭವಾಗುತ್ತಿದ್ದಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಈ ಸಭೆಗೆ ಯಾರಾದರೂ ದಯವಿಟ್ಟು ಮಾಸ್ಕ ಧರಿಸದೆ ಬಂದಿದ್ದರೆ ಸಭೆಯಿಂದ ಹೊರ ಹೋಗಿ ಇಲ್ಲವೇ ಅವರಿಗೆ ಮಾಸ್ಕ ಕೊಡಿ ಎಂದು ಸೂಚಿಸಿದರು.
ಈ ವೇಳೆ ಅಧಿಕಾರಿಗಳ ಎರಡನೇ ಸಾಲಿನಲ್ಲಿ ಕುಳಿತಿದ್ದ ಕೆ.ಎ.ಎಸ್. ಅಧಿಕಾರಿ ಹಾಗೂ ವಿಶೇಷ ಭೂಸ್ವಾಧಿನಾಧಿಕಾರಿ ಆಗಿರುವ ಶಾರದಾ ಕೋಲ್ಕಾರ್ ಅವರು ಮಾಸ್ಕ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಜೋಶಿಅವರು, ಕೂಡಲೇ ಅವರನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳಿಗೆ ಕೋವಿಡ್ 19 ಬಗ್ಗೆ ಯಾವುದೇ ಗಂಭೀರತೆ ಇದ್ದಂತೆ ಕಾಣುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಅಚ್ಚರಿಯ ಸಂಗತಿ ಅಂದರೆ ಶಾರದಾ ಕೋಲ್ಕಾರ್ ಅವರು ಕರೊನಾ ಸಂಬಂಧಿತ ವಸ್ತುಗಳ ಖರೀದಿ ಸಮಿತಿಯ ನೋಡಲ್ ಅಧಿಕಾರಿ ಆಗಿದ್ದಾರೆ.
ಅವರೇ ಮಾಸ್ಕ್ ಧರಿಸದೇ ಸಭೆಗೆ ಆಗಮಿಸಿರುವುದು ಅಧಿಕಾರಿಗಳ ಅಚ್ಚರಿಗೂ ಕಾರಣವಾಯಿತು ಇಡೀ ಸಭೆ ಕೆಲ ಕಾಲ ಮೌನಕ್ಕೆ ಶರಣಾಗಿದ್ದು ಕಂಡು ಬಂತು.
ಮಾಸ್ಕ್ ಧರಿಸಿದೆ ಬಂದಿದ್ದ ಶಾರದಾ ಅವರಿಗೆ ಸಚಿವರು ಹೊರಗೆ ಹೋಗುವಂತೆ ಸೂಚಿಸಿದರು. ಕೆಲವೇ ಕ್ಷಣದಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಯೊಬ್ಬರು ಮಾಸ್ಕ್ ತಂದು ನೀಡಿದರು.
ಆ ಬಳಿಕ ಶಾರದಾ ಕೋಲ್ಕಾರ್ ಅದನ್ನು ಧರಿಸಿದ ಬಳಿಕ ಸಭೆ ಆರಂಭಗೊಂಡಿದ್ದು ವಿಶೇಷವಾಗಿತ್ತು.