ರಾಜ್ಯ

ಹುಡಾ ಕಾರ್ಯಾಚರಣೆಗೆ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಆಕ್ರೋಶ




ಧಾರವಾಡ prajakiran.com : ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರ ಅಕ್ರಮ ಲೇಔಟ್ ವಿರುದ್ದ ತೆರವು ಕಾರ್ಯಾಚರಣೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಇದು ಹಣ ಮಾಡುವ ತಂತ್ರವಾಗಿದೆ ಎಂದು  ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಆಕ್ರೋಶ  ವ್ಯಕ್ತಪಡಿಸಿದ್ದಾರೆ.

ಕೋವಿಡ್ -19 ಸಂದರ್ಭದಲ್ಲಿ ಈ ಕಾರ್ಯಾಚರಣೆ ನಡೆಸುವ ಅಗತ್ಯವಿರಲಿಲ್ಲ. ಇದು ಜನರಿಗೆ ಭಯ ಹುಟ್ಟಿಸುವ ತಂತ್ರವಾಗಿದೆ ಎಂದು ಗುಡುಗಿದ್ದಾರೆ.

ಅವರಿಗೆ ನಿಜವಾಗಿಯೂ ತಾಕತ್ತಿದ್ದರೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿಯ ಎಲ್ಲ ಅಕ್ರಮ ಸಕ್ರಮ ತೆರವು ಗೊಳಿಸಲಿ ಎಂದು ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ.



ಕಂದಾಯ ಇಲಾಖೆ ಕಾನೂನು ಪ್ರಕಾರ ಭೂ ಖರೀದಿ ಮಾಡಲು ಅವಕಾಶವಿದೆ. ಒಂದು ಕಡೆ ರಾಜ್ಯ ಸರಕಾರವೇ ಮಧ್ಯಮ ಹಾಗೂ ಬಡವರಿಗೆ ನೆರವು ನೀಡಲು ಅಕ್ರಮ ಸಕ್ರಮ ಮಾಡಿಕೊಟ್ಟಿದೆ. ಇನ್ನೊಂದು ಕಡೆ ಇವರು ಬಡವರ ವಿರುದ್ದವೇ ಸಮರ ಸಾರಿದಂತೆ ಕಾಣುತ್ತಿದೆ ಎಂದು ದೂರಿದರು.

ಹುಬ್ಬಳ್ಳಿ-ಧಾರವಾಡದಲ್ಲಿ ಸುಮಾರು 25 ಸಾವಿರ ಅಕ್ರಮ ಸಕ್ರಮ ಮನೆಗಳಿವೆ. ಮಹಾನಗರ ಪಾಲಿಕೆಗೆ ಪ್ರತಿ ವರ್ಷ ತೆರಿಗೆ ತುಂಬುತ್ತಾರೆ.  ದಾಖಲೆ ಬೇಕಿದ್ದರೆ ಮಹಾನಗರ ಪಾಲಿಕೆಯಲ್ಲಿ ಪಡೆಯಲಿ ಎಂದು ತಿರುಗೇಟು ನೀಡಿದ್ದಾರೆ.



ಬಡವರು ಸಾಲಸೂಲ ಮಾಡಿ ಮನೆ, ನಿವೇಶನ ಖರೀದಿಸಿದ್ದಾರೆ. ಅದರಲ್ಲಿ ಹುಡಾದವರ ಕಿರಿಕಿರಿಗೆ ಕಂಗಾಲು ಆಗಿದ್ದಾರೆ.

11 ಎ ಪ್ರಕಾರ ಎಲ್ಲವೂಕಾನೂನು ಬದ್ದವಾಗಿದೆ. ಈ ರೀತಿ ಕಲ್ಲು ಕಿತ್ತು ಹಾಕಿ ಆನಂತರ ವ್ಯವಹಾರ ಕುದಿರಿಸಿಕೊಳ್ಳುವುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಆರೋಪಿಸಿದ್ದಾರೆ.




ಹುಡಾ ಅಧ್ಯಕ್ಷರಿಗೆ ಅಭಿವೃದ್ದಿಯ ಬಗ್ಗೆ ಕಾಳಜಿಯಿದ್ದರೆ ಹುಬ್ಬಳ್ಳಿ-ಧಾರವಾಡ ಎಲ್ಲಾ ಅಕ್ರಮ ಲೇ ಔಟ್ ನಲ್ಲಿರುವ ಮನೆಗಳನ್ನು ತೆರವುಗೊಳಿಸಲಿ ಎಂದು ಕುಟುಕಿದ್ದಾರೆ.

ಒಂದು ವೇಳೆ ಹೀಗೆ ಮುಂದುವರೆದರೆ ಹುಡಾ ಅಧ್ಯಕ್ಷರ ವಿರುದ್ದವೇ ಕಾಂಗ್ರೆಸ್ ಪಕ್ಷದವತಿಯಿಂದ ಹೋರಾಟ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ದೀಪಕಚಿಂಚೋರೆ ಎಚ್ಚರಿಸಿದ್ದಾರೆ.    



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *